ರಾಜಕೀಯ ನಾಯಕರ ನವರಂಗಿ ಆಟ
ನನ್ ಪಕ್ಷ.. ನಿನ್ ಪಕ್ಷ ಎಂದು ರಾಜಕೀಯ ಕಾರ್ಯಕರ್ತರ ತಾಕಲಾಟ..!!
ರಾಜ್ಯದಲ್ಲಿ ಸೂತಕದ ಛಾಯೆಯ ನಡುವೆಯೂ ಮದುವೆ ರಿಸೆಪ್ಷನ್ನಲ್ಲಿ ರಾಜ್ಯ ಕೈ-ಕಮಲ ನಾಯಕರ ನಗುವಿನ ಹರಟೆ
ರಾಜಕೀಯದಲ್ಲಿ ನಾಯಕರಿಗೆ ಪಕ್ಷಭೇದವಿಲ್ಲ, ಪಕ್ಷಭೇದವಿರೋದು ಕಾರ್ಯಕರ್ತರಿಗೆ ಮಾತ್ರ ಎಂಬುದಕ್ಕೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ 1.43 ನಿಮಿಷದ ವಿಡಿಯೋ ಒಂದು ಸಾಕ್ಷಿಯಾಗಿದೆ. ರಾಜ್ಯ ಬಿಜೆಪಿಯ ಹಿರಿಯ ಪ್ರಭಾವಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮೊಮ್ಮಗ ಹಾಗೂ ಶಿವಮೊಗ್ಗ ಕ್ಷೇತ್ರದ ಸಂಸದ ಬಿ. ವೈ ರಾಘವೇಂದ್ರ ಅವರ ಪುತ್ರನ ವಿವಾಹ ಆರತಕ್ಷತೆಯ ಸಮಾರಂಭದಲ್ಲಿ ರಾಜ್ಯದ ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಹಾಜರಿರುವುದು ಮಾತ್ರವಲ್ಲದೇ ಅವರೆಲ್ಲರೂ ಪರಮಾಪ್ತ ಮಿತ್ರರಂತೆ ಹರಟೆ ಹೊಡೆಯುತ್ತಾ ಖುಷಿಖುಷಿಯಾಗಿರೋ ವಿಡಿಯೋ ಇದಾಗಿದ್ದು, ಈ ವಿಡಿಯೋಗೆ ಒಂದು ವಾಯ್ಸ್ ಓವರ್ ನೀಡಲಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದ ವಾಯ್ಸ್ ಓವರ್ ನಲ್ಲಿರೋ ಕಂಟೆಂಟ್ ಗಳನ್ನು ಯಥಾವತ್ತಾಗಿ ಅಕ್ಷರ ರೂಪದಲ್ಲಿ ಇಲ್ಲಿ ನಾವು ನೀಡುತ್ತಿದ್ದೇವೆ.

ನೋಡ್ರೋ.. ಕಾರ್ಯಕರ್ತರೇ.. ಕಣ್ತುಂಬಾ ನೋಡ್ಕೊಳ್ಳಿ. ರಾಜಕಾರಣಿಗಳ ಮುಖ ಒಮ್ಮೆ ಕಣ್ತುಂಬಾ ನೋಡ್ಕೊಳ್ಳಿ. ಬಿಜೆಪಿ.. ಕಾಂಗ್ರೆಸ್.. ಇವ್ರೇ ಅಲ್ವಾ ಇತ್ತೀಚೆಗೆ ರಾಜ್ಯ ಸರ್ಕಾರ ರಾಜೀನಾಮೆ ಕೊಡ್ಬೇಕು, ಕಾನೂನಾತ್ಮಕವಾಗಿ ಎ1, ಎ2, ಎ3ಆಗ್ಬೇಕು… 11 ಜನ ಬಲಿಯಾಗಿರುವಂತಹ ಆರ್.ಸಿ.ಬಿ. ಒಂದು ನಿರ್ಲಕ್ಷ್ಯತನ, ಬೇಜವಾಬ್ದಾರಿತನ ಬಂದೋಬಸ್ತ್ ನಲ್ಲಿ ಇವ್ರೇ ನೇರ ಹೊಣೆ ಅಂತ, ಇವ್ರೇ ಅಲ್ವಾ ನರ ನಾಡಿಗಳಲ್ಲೆಲ್ಲಾ ಕಿರುಚ್ಕೊಂಡು ಬಂಧನ ಮಾಡಿ.. ಬಂಧನ ಮಾಡಿ.. ರಾಜೀನಾಮೆ ಕೊಡಿ ಅಂತ ಬೊಗಳ್ತಾ ಇದ್ದಂತವ್ರು..!? ನೋಡ್ರಿ.. ಇವ್ರೆಲ್ಲಾ ಒಂದೇ ಕಣ್ರೋ..! ಇವ್ರು ಫ್ಯಾಶನ್ ಮಾಡ್ಕೊಂಡಿದ್ದಾರೆ ಪಾಲಿಟಿಕ್ಸ್ ನ. ಬಲಿಯಾಗ್ತಿರೋದು ನಮ್ಮ ಕಾರ್ಯಕರ್ತರು..! ಕಾರ್ಯಕರ್ತರು, ಕಾರ್ಯಕರ್ತರು, ದ್ವೇಷ.. ಜಾತಿ.. ಕೋಮು ಗಲಭೆ ತಂದಿಟ್ಕೊಂಡು.. ಅವನ್ ಜೈ.. ಇವನ್ ಜೈ.. ಹೇ ನಮ್ ಬಾಸು.. ನನ್ ಫಾಲೋವರ್ರು.. ನಮ್ ಇವ್ರು.. ನಮ್ ಗುರು.. ನಮ್ ಶಿಷ್ಯ.. ಅಂದ್ಕೊಂಡು ನೀವುಗಳು ಕೋಮು ಗಲಭೆಗೆ ಸಿಕ್ಕಾಕೊಂಡು ನೀವು ಬಲಿಯಾಗ್ತಿರೊದು.
ಕಾರ್ಯಕರ್ತರೇ.. ನಿಮ್ಮಿಂದ, ನಿಮ್ಮ ಹೆಂಡ್ತಿ, ಮಕ್ಳು ಎಲ್ಲಾರೂನು ಇವತ್ತಿಗೂ ಕೂಲಿ ಮಾಡ್ಕೊಂಡಿರ್ತಾರೆ. ಯಾರು ಲಕ್ಷುರಿ ಲೈಫ್ ಲೀಡ್ ಮಾಡ್ತಿರಲ್ಲಾ..! ನೋಡ್ರಿ.. ಇವ್ರೆಲ್ಲಾ ಒಳ್ಳೆ ಲಕ್ಷುರಿ ಲೈಫ್ ಲೀಡ್ ಮಾಡ್ಕೊಂಡು, ಜನ್ರ ಜೀವಗಳ ಜೊತೆ ಆಟ ಆಡ್ತಿದ್ದಾರೆ. ಹೆಣಕ್ಕೂ ಹಣವನ್ನು ಕಟ್ಟಿ, ಸೂತಕ ಇರುವಂತಹ ನಮ್ ರಾಜ್ಯದಲ್ಲಿ, ಸಂಭ್ರಮಾಚರಣೆ ಮಾಡ್ತಿದ್ದಾರೆ. ಇತ್ತೀಚೆಗೆ ಹಾಕಿದ್ದ ಕಣ್ಣೀರು ನವರಂಗಿ ಕಣ್ಣೀರೆ..! ಇವ್ರೆಲ್ಲಾ ಒಂದೇ.. ಇವ್ರೆಲ್ಲಾ ಕಾಣದ ಕೈ ಅನ್ನೋ ತರ, ಆಡೋ ಆಟ ಆಡ್ತಾನೆ ಇರ್ತಾರೆ. ಬಲಿಯಾಗ್ತಿರೋದು ನಮ್ಮ ಕಾರ್ಯಕರ್ತರು.. ನಮ್ಮ ಜನ್ರು.. ನಾವು ಬದ್ಲಾಗ್ಬೇಕು. ಇತ್ತೀಚೆಗೆ ಆಗಿದ್ದಂತಹ ಆರ್.ಸಿ.ಬಿ. ಒಂದು ಐಪಿಎಲ್ ಕಪ್ ತಂದ್ರು.. ದೊಡ್ಡ ಕಪ್ಪು ಚುಕ್ಕೆ ಇಟ್ಟು 11 ಜನ್ರನ್ನು ಬಲಿ ತಗೊಂಡು ಅಮಾಯಕ ಪೊಲೀಸ್ರನ್ನ ಅಮಾನತು ಮಾಡೋ ಕೆಲ್ಸ ಮಾಡಿದ್ದಂತಹ ರಾಜಕಾರಣಿಗಳು.. ಇವ್ರ ನವರಂಗಿ ಆಟಕ್ಕೆ ಇನ್ನೆಷ್ಟು ಜನ ಬಲಿಯಾಗ್ಬೇಕು..? ಇನ್ಮೇಲಾದ್ರೂ ಬುದ್ದಿ ಕಲೀರೋ..! ಇವ್ರೆಲ್ಲಾ ಒಂದೇ ಕಣ್ರೋ.. ಬಲಿಯಾಗೋದು ಕಾರ್ಯಕರ್ತರು.. ಬದ್ಲಾಗ್ರೋ.. ಈ ರಾಜಕೀಯ ಪಕ್ಷ ಬಿಟ್ಟು ಹೊರಗೆ ಬನ್ರೋ.. ದರಿದ್ರ ಸರ್ಕಾರಗಳು…!!