ಪುತ್ತೂರು: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಆಶ್ರಯದಲ್ಲಿ ಪುತ್ತೂರು ತಾಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಮಟ್ಟದ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರುಗಳಿಗೆ ತರಬೇತಿ ಶಿಬಿರ, ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಜೂ.13ರಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಇವರ ಉಪಸ್ಥಿತಿಯಲ್ಲಿ ನಡೆಯಿತು.
ರಾಜ್ಯ ತರಬೇತುದಾರ ಮುಹಮ್ಮದ್ ಬಡಗನ್ನೂರು ತರಬೇತಿ ಶಿಬಿರವನ್ನು ನಡೆಸಿದರು. ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಜಯಪ್ರಕಾಶ್, ಸಂಪನ್ಮೂಲ ವ್ಯಕ್ತಿ ಸುಜಾ ಡಿ ಸೋಜ ಸಹಕರಿಸಿದರು.
ತರಬೇತಿ ಶಿಬಿರದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನತುಲ್ ಮೆಹ್ರಾ, ಡಾ.ಹಾಜಿ.ಎಸ್ ಅಬೂಬಕರ್ ಆರ್ಲಪದವು, ನಿವೃತ್ತ ಮುಖ್ಯಗುರು ಪ್ರತಿಭಾ ಎಚ್, ಹಿರಿಯರಾದ ಗೋಪಾಲಕೃಷ್ಣ ಓಕುಣ್ಣಾಯ, ಅಭಿವೃದ್ಧಿ ಅಧಿಕಾರಿ ಆಶಾ ಬಿ, ಗ್ರಂಥಪಾಲಕಿ ಭಾಗೀರಥಿ, ಸದಾನಂದ ಭರಣ್ಯ, ಪವಿತ್ರ ಕೆ, ನವಿತ, ಅಂಕಿತ ಕೆ ಎಸ್, ಪ್ರತೀಕ್ಷ ಪಾಣಾಜೆ ಶಾಲಾ ಸಹ ಶಿಕ್ಷಕಿ ಸವಿತಾ ಸಿ ಎ ಬಡಗನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಶೀಲ ಸದಸ್ಯರುಗಳಾದ ಸಂತೋಷ್ ಆಳ್ವ, ಕೆ ಅಭಿವೃದ್ಧಿ ಅಧಿಕಾರಿ ಕೆ.ಪಿ. ಸುಭಾಷ್, ಪ್ರಿಯಾ ಎಸ್ ನಾಯಕ್, ರಮ್ಯಾ, ಉಶಾಲತಾ, ಮುಖ್ಯಗುರು ಹರಿಣಾಕ್ಷಿ ಎ, ಹೃಷಿ ಸಖಿ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸತೀಶ್ ಬಂಗೇರ, ದೀಪ್ತಿ ಬಿ, ದೀಕ್ಷಾ ಎನ್, ನೀಲಾ ಎ ಎಸ್, ಮತ್ತಿತರರು ಉಪಸ್ಥಿತರಿದ್ದರು.