ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಂಜಲ್ತಡ್ಕ, ಕೋಶಾಧಿಕಾರಿ ಕೃಷ್ಣಪ್ರಸಾದ್ ಕೊಚ್ಚಿ, ಜೊತೆ ಕಾರ್ಯದರ್ಶಿ ವಿಶ್ವನಾಥ ಕೆರೆಮಾರು ಆಯ್ಕೆ
ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾವು ಇದರ ಮಹಾಸಭೆ ಹಾಗೂ 42ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯು ಸಮಿತಿಯ ಗೌರವಾಧ್ಯಕ್ಷರಾದ ನನ್ಯ ಅಚ್ಚುತ ಮೂಡೆತ್ತಾಯ ಇವರ ಅಧ್ಯಕ್ಷತೆಯಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜೂ.7ರಂದು ನಡೆಯಿತು.

ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ನವೀನ್ ನನ್ಯಪಟ್ಟಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ್ ಮಂಜಲ್ತಡ್ಕ ಕೋಶಾಧಿಕಾರಿಯಾಗಿ ಕೃಷ್ಣಪ್ರಸಾದ್ ಕೊಚ್ಚಿ ಇವರು ಪುನರಾಯ್ಕೆಗೊಂಡರು. ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥ ಕೆರೆಮಾರು, ಸಮಿತಿಯ ಗೌರವ ಸಲಹೆಗಾರ ಚಂದ್ರಶೇಖರ ರಾವ್ ನಿಧಿಮುಂಡ ಮತ್ತು ಲೋಕೇಶ್ ಚಾಕೋಟೆ ಇವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಆ.15ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಿತಿಯ ವತಿಯಿಂದ ನಡೆಯುವ ಕ್ರೀಡಾಕೂಟ ಮತ್ತು ಆ.27ರಂದು ನಡೆಯುವ ಗಣೇಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ನವೀನ್ ನನ್ಯಪಟ್ಟಾಜೆ, ಶ್ರೀಕಾಂತ್ ಕಾವು, ಚಂದ್ರಶೇಖರ ರಾವ್ ನಿಧಿಮುಂಡ, ಲೋಕೇಶ್ ಚಾಕೋಟೆ, ಸುಂದರ ಪೂಜಾರಿ ಕೆರೆಮಾರು, ನಾರಾಯಣ ಆಚಾರ್ಯ ಮಳಿ, ನಿರಂಜನ್ ಕಮಲಡ್ಕ, ಯೋಗೀಶ್ ಹೊಸಮನೆ, ಲೋಹಿತ್ ಆಮ್ಚಿನಡ್ಕ, ಸುಂದರ ಪುವಂದೂರು, ಮಹೇಶ್ ಕೆ ಎಸ್, ಶೇಷಪ್ಪ ನಾಯ್ಕ ಸಸ್ಪೆಟ್ಟಿ, ಸಂಕಪ್ಪ ಪೂಜಾರಿ ಚಾಕೋಟೆ, ಸಂದೇಶ್ ಚಾಕೋಟೆ, ಜಗನ್ನಿವಾಸ ಗೌಡ ನಿಧಿಮುಂಡ, ಮಣಿ ಕಾವು,ಐತಪ್ಪ ಗೌಡ ಪಳನೀರು, ಶಿವಪ್ಪ ನಾಯ್ಕ ಹೆಚ್ ಉಪಸ್ಥಿತರಿದ್ದರು.