ನೆಲ್ಯಾಡಿ: ಆರ್ಲ ಸೈಂಟ್ ಮೇರಿಸ್ ಚರ್ಚ್ನ ವಾರ್ಷಿಕ ಮಹಾಸಭೆಯು ಚರ್ಚ್ನಲ್ಲಿ ನಡೆಯಿತು.
ಸಭೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಸದ್ರಿ ಸಭೆಯಲ್ಲಿ 2025-26ನೇ ಸಾಲಿನ ಟ್ರಸ್ಟಿಗಳ ಆಯ್ಕೆ ಮಾಡಲಾಯಿತು.
ನೂತನ ಟ್ರಸ್ಟಿಗಳಾಗಿ ಹೃದಿತ್ ಪುದುಮನ, ಜೈಸನ್ ಕುಳತಿನಾಲ್, ಜೋಸ್ಟಿನ್ ನೆನ್ಮಣಿ ಮಟ್ಟಮ್, ಬಾಬು ಮುಳವೇಲಿ ಪರಂಬಿಲ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ನ್ಯಾಯವಾದಿ ಜೇಮ್ಸ್ ಪುದುಮನ ಹಾಗೂ ಅಕೌಂಟೆಂಟ್ ಆಗಿ ಸೆಬಾಸ್ಟಿಯನ್ ಪುಳಿಕಾಯತ್ ಆಯ್ಕೆಯಾದರು. ನೆಲ್ಯಾಡಿ ಹಾಗೂ ಆರ್ಲ ಚರ್ಚ್ಗಳ ಧರ್ಮ ಗುರು ವಂ.ಶಾಜಿ ಮ್ಯಾಥ್ಯು ಅವರು ಧರ್ಮಾಧ್ಯಕ್ಷರ ಒಪ್ಪಿಗೆಯೊಂದಿಗೆ ನೂತನ ಟ್ರಸ್ಟಿಗಳಿಗೆ ಪ್ರಮಾಣ ವಚನ ಬೋಧಿಸಿದರು.