ಪುತ್ತೂರು: ಸವಣೂರು-ಬೆಳ್ಳಾರೆ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಪ್ರತಿದಿನ ಸಾವಿರಾರು ವಾಹನ ಸಂಚಾರದ ಸ್ಥಳವಾಗಿರುವ ಸವಣೂರು ರೈಲ್ವೇ ಟ್ರ್ಯಾಕ್ ನ ಸಮೀಪದ ರಸ್ತೆಯನ್ನು ಹೊಸದಾಗಿ ಡಾಮರೀಕರಣ ಮಾಡಿದ್ದು, ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡ ನಿರ್ಮಾಣವಾದ ಹಿನ್ನಲೆ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಿಲ್ಲ. ಹೊಂಡದಲ್ಲಿ ನೀರು ತುಂಬಿ ರೈಲ್ವೇ ಟ್ರ್ಯಾಕ್ ಬಳಿ ಕೃತಕ ಕೆರೆ ಸೃಷ್ಠಿಯಾಗಿದ್ದು. ಹೊಂಡವನ್ನು ಮುಚ್ಚದಿದ್ದರೆ ಪ್ರತಿಭಟಿಸಲಾಗುವುದು ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.