ನಾಯಕಿಯಾಗಿ ಪೂಜಾಶ್ರೀ, ಉಪನಾಯಕನಾಗಿ ಹಿತೇಶ್ ಬಿ ಬಲ್ಯಾಯ
ಪುತ್ತೂರು: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರು ಶಾಲೆಯ 2025-26 ನೇ ಸಾಲಿನ ವಿದ್ಯಾರ್ಥಿ ಮಂತ್ರಿಮಂಡಲದ ರಚನೆ ಚುನಾವಣೆ ಮೂಲಕ ಜೂನ್ 14ರಂದು ಮುಖ್ಯ ಗುರು ಮೋಹಿನಿ ಉಪಸ್ಥಿತಿಯಲ್ಲಿ ನಡೆಯಿತು.
ಶಾಲಾ ನಾಯಕಿಯಾಗಿ ಎಂಟನೇ ತರಗತಿಯ ಪೂಜಾಶ್ರೀ ಹಾಗೂ ಉಪನಾಯಕನಾಗಿ 7ನೇ ತರಗತಿಯ ಹಿತೇಶ್ ಬಿ ಬಲ್ಯಾಯ ಚುನಾಯಿತರಾದರು.ಗೃಹ ಮಂತ್ರಿಗಳಾಗಿ ಸುಶಾನ್ ಎಂ, ಸ್ವಸ್ತಿಕ್, ತೇಜಸ್, ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ರಕ್ಷಿತ್ ಎಂ ಕೆ ಮತ್ತು ಸೃಜನ್ ,ವಿದ್ಯಾ ಮತ್ತು ವಾರ್ತಾ ಮಂತ್ರಿಗಳಾಗಿ ಧನ್ಯಶ್ರೀ, ಇಫ್ರಾ, ಫಾತಿಮತ್ ಅಫ್ನ, ಹರ್ಷಿತ,
ಆಹಾರ ಮಂತ್ರಿಗಳಾಗಿ ಫಾತಿಮಾತ್ ತಂಸೀರಾ, ಧನುಶ್, ಪುನೀತ್, ಕ್ರೀಡಾ ಮತ್ತು ಶಿಸ್ತು ಮಂತ್ರಿಗಳಾಗಿ ಧ್ರುವಿ, ಪ್ರೀತೇಶ್ ಡಿಸೋಜಾ, ಮುಹಮ್ಮದ್ ಝಾಹಿದ್,
ಆರೋಗ್ಯ ಮತ್ತು ಶುಚಿತ್ವ ಮಂತ್ರಿಗಳಾಗಿ ಆಯಿಷತ್ ಝಿಕ್ರ ಇವರನ್ನು ಆಯ್ಕೆ ಮಾಡಲಾಯಿತು.
ಶಾಲೆಯ ಎಲ್ಲಾ ಸಹಶಿಕ್ಷಕರು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಚುನಾವಣೆಯು ಇವಿಎಂ ಸಿಮ್ಯುಲೇಟರ್ ಮೊಬೈಲ್ ಆಪ್ ಮೂಲಕ ಮತದಾನ ಪ್ರಕ್ರಿಯೆಯನ್ನು ಶಾಲಾ ಶಿಕ್ಷಕಿ ವಿದ್ಯಾ ಕೆ ಇವರು ನಡೆಸಿಕೊಟ್ಟರು.