ಪುತ್ತೂರು: ಗುರು ಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಕೆದಂಬಾಡಿ ಶಕ್ತಿ ಕೇಂದ್ರದ ವತಿಯಿಂದ ನಿವೃತ್ತ ಗುರುಗಳಾದ ದೇವಪ್ಪ ಗೌಡ ಕನ್ನಡಮೂಲೆ ಮತ್ತು ಜಯಶೀಲ ಕನ್ನಡಮೂಲೆ ದಂಪತಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಶಕ್ತಿ ಕೇಂದ್ರ ಪ್ರಮುಖ್ ಶರತ್ ಗುತ್ತು, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿಠಲ ರೈ ಮಿತ್ತೋಡಿ, ಬೂತ್ ಸಂಖ್ಯೆ 187ರ ಪ್ರಧಾನ ಕಾರ್ಯದರ್ಶಿ ಸುಭಾಶ್ ರೈ ಮಿತ್ತೋಡಿ ಉಪಸ್ಥಿತರಿದ್ದರು.