ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು, ಫ್ಯಾಷನ್ ಡಿಸೈನ್ ವಿಭಾಗ, “ಫಸೆರಾ” ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಪ್ರಥಮ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಗೆ “CARICATURE ” ವಿಷಯದಲ್ಲಿ ತರಬೇತಿ ಕಾರ್ಯಗಾರ ಜು.25 ರಂದು ನಡೆಯಿತು.
ತರಬೇತುದಾರರಾಗಿ ನಾರಾಯಣ ರೈ ಕುಕ್ಕುವಳ್ಳಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ “ಕ್ಯಾರಿಕೇಚರ್” ಎನ್ನುವ ವಿಷಯದಲ್ಲಿ ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಲೆ ಎಂದರೇನು? ಬದುಕಿನಲ್ಲಿ ವ್ಯಂಗ್ಯ ಚಿತ್ರಗಳ ಮಹತ್ವವನ್ನು ತಿಳಿಸಿಕೊಡುವುದರ ಜೊತೆಗೆ ಕಲೆಯ ಬಗೆಗಿನ ಮಹತ್ವವನ್ನು ಮನಗಾಣಿಸಲು ಮತ್ತು ಸೂಕ್ತವಾದ ವಿಷಯಗಳನ್ನು ಬಳಸಿಕೊಂಡು ದೈನಂದಿನ ಬದುಕಿನಲ್ಲಿ ನಾವು ಕಾಣುವ ಸನ್ನಿವೇಶಗಳನ್ನು ಯಾವ ರೀತಿಯಲ್ಲಿ ವ್ಯಂಗ್ಯ ಚಿತ್ರಗಳ ಮೂಲಕ ತೋರಿಸಬಹುದು ಎಂದು ತಿಳಿಸಿಕೊಟ್ಟರು.
ಮಾತನಾಡಿದ ಅವರು 65ಆಸಕ್ತ ವಿದ್ಯಾರ್ಥಿ ಕಲಾವಿದರು,ಪ್ರಾಂಶುಪಾಲರು ಸೇರಿದಂತೆ ಉಪನ್ಯಾಸಕರು ಸುಮಾರು ಒಂದೂವರೆ ಗಂಟೆಗಳ ಕಾಲ ಭಾಗವಹಿಸಿರುವುದು, ನನ್ನ ವಿದ್ಯಾರ್ಥಿ, ಶೈಕ್ಷಣಿಕ ಕಾಲಗಳನ್ನು ನೆನಪಿಸಿತು. ಮಾನ್ಯ ಪ್ರಾಂಶುಪಾಲರು ಸ್ವತಃ ವ್ಯಂಗ್ಯ ಚಿತ್ರ ಆಸಕ್ತರಾಗಿದ್ದು, 2025 ಜನವರಿಯಲ್ಲಿ ಜರುಗಿದ ಸುದ್ದಿ ಸಸ್ಯ ಜಾತ್ರೆಯಲ್ಲಿ,ವ್ಯಂಗ್ಯ ಚಿತ್ರದಲ್ಲಿ ಪ್ರಥಮ ಬಹುಮಾನ ವಿಜೇತರಾಗಿದ್ದವರು, ವಿದ್ಯಾರ್ಥಿಗಳೂ ಕಲಿಕೆಯೊಂದಿಗೆ ಬೇರೆಬೇರೆ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕೆಂದೂ, ವ್ಯಂಗ್ಯ ಚಿತ್ರಗಳ ಮಹತ್ವವನ್ನೂ ತಿಳಿಸಿದರು. ಪ್ರಾಂಶುಪಾಲರು ಸಂಪತ್ ಕೆ. ಪಕ್ಕಳ ಅಧ್ಯಕ್ಷತೆಯ ಮಾತುಗಳನ್ನಾಡಿದರು. ಉಪನ್ಯಾಸಕಿ ಧನ್ಯಶ್ರೀ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ ನಡುಬೈಲು ಆಗಮಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಬಿಂದು ಪ್ರಾರ್ಥಿಸಿದರು,ದೀಕ್ಷಿತಾ ಸ್ವಾಗತಿಸಿದರು, ಉಪನ್ಯಾಸಕಿ ಜನಿತಾ ಪರಿಚಯಿಸಿದರು,ಸ್ಪಂದನಾ ವಂದಿಸಿದರು.