ಕೖೊಲ ಬಡಗನ್ನೂರು ಶಾಲೆಯಲ್ಲಿ ಶೌರ್ಯ ತಂಡದಿಂದ ಶ್ರಮದಾನ

0

ಬಡಗನ್ನೂರು : ಕೖೊಲ ಬಡಗನ್ನೂರು ಶಾಲಾ ಮುಂಭಾಗದಲ್ಲಿದ್ದ ದೊಡ್ಡ ಗ್ರಾತ್ರದ ನೆಲ್ಲಿಕಾಯಿ ಮರವೊಂದು ಭಾರಿ ಗಾಳಿಮಳೆಗೆ ಶಾಲಾ ಸಭಾಂಗಣದ ಮೇಲೆ ಉರುಳಿ ಬಿದ್ದು ಸಭಾಂಗಣ ಸಂಪೂರ್ಣ ಜಕಂಗೊಂಡಿದ್ದು  ಉರುಳಿ ಬಿದ್ದ ಮರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಇದರ ಅರಿಯಡ್ಕ ವಲಯ ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಮರವನ್ನು ಮತ್ತು ಸಭಾಂಗಣದ ಗೋಡೆಯನ್ನು ತೆರವುಗೊಳಿಸಿದರು.

ಶ್ರಮಾದಾನದಲ್ಲಿ  ಶೌರ್ಯ ತಂಡದ ಸದಸ್ಯರಾದ ಗಣೇಶ , ರಾಘವ, ವಸಂತ, ವಸಂತಿ ,ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ ಗೌಡ , ಉಪಾಧ್ಯಕ್ಷ ಸತೀಶ್ ನಾಯ್ಕ, ,ಹಿರಿಯ ವಿದ್ಯಾರ್ಥಿಗಳಾದ ವೆಂಕಪ್ಪ ಗೌಡ , ಕೌಶಿಕ್ ಅನಿಲ್,ಹೇಮನಾಥ, ವಸಂತ, ನವೀನ, ಪೋಷಕಿ ವನಿತಾ ಭಾಗವಹಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ  ಸುಶೀಲ ಪಕ್ಯೊಡ್ , ಸದಸ್ಯ ಸಂತೋಷ್ ಆಳ್ವ,ಶಾಲಾ ಕುಂಬ್ರ ಕ್ಲಸ್ಟರ್ ಸಿ ಆರ್ ಪಿ ಶಶಿಕಲಾ ಶಾಲಾ ಮುಖ್ಯೋಪಾಧ್ಯಾಯರು ,ಶಿಕ್ಷಕವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here