ಪುತ್ತೂರು: ಉಪ್ಪಿನಂಗಡಿ ಹೆಚ್.ಎಂ ಆಡಿಟೋರಿಯಂ ಎದುರುಗಡೆಯ ಎವರೆಸ್ಟ್ ಕಾಂಪ್ಲೆಕ್ಸ್ನಲ್ಲಿ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಕೇಂದ್ರ ರತ್ನಶ್ರೀ ಸುಪಾರಿ ಟ್ರೇಡರ್ಸ್ ಆ.20ರಂದು ಶುಭಾರಂಭಗೊಂಡಿತು.
ಮಾಲಕರಾದ ಚಂದ್ರಹಾಸ ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ ಅವರ ತಾಯಿ ಸುಲೋಚನ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಹೋದರರಾದ ಬಾಲಕೃಷ್ಣ ಕಜೆಕಾರ್ ಮತ್ತು ಸತೀಶ್ ಶೆಟ್ಟಿ ಕೆಪುಕಣಿ, ಅಡಿಕೆ ವ್ಯಾಪಾರಸ್ಥರಾದ ಯ. ರಾಮ, ಶ್ರೀಮಾತ ಸಚಿನ್ ಹಾಗೂ ಉದ್ಯಮಿಗಳಾದ ಹಕಿಂ, ಜಬ್ಬಾರ್,ದಿನೇಶ್, ಪಯಾಝ್, ಬಂಧು ಮಿತ್ರರು ಉಪಸ್ಥಿತರಿದ್ದರು.