ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ – ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ವಿದ್ಯಾರ್ಥಿನಿ ಸ್ಮೃತಿ ಪಲ್ಲತ್ತಾರು ರಾಜ್ಯ ಮಟ್ಟಕ್ಕೆ ಆಯ್ಕೆ 

0

ಪುತ್ತೂರು: ಸೋಮೇಶ್ವರ ಪಿ.ಎಂ. ಶ್ರೀ ಸರಕಾರಿ ಹಿ.ಪ್ರಾ.ಶಾಲೆ ಉಚ್ಚಿಲಗುಡ್ಡೆ ಇಲ್ಲಿ ಆ.26ರಂದು ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಒಂಭತ್ತನೇ ಎ ತರಗತಿ ವಿದ್ಯಾರ್ಥಿನಿ ಸ್ಮೃತಿ ಪಲ್ಲತ್ತಾರುರವರು ಪ್ರಥಮ ಸ್ಥಾನ ದೊಂದಿಗೆ ಗೋಲ್ಡ್ ಮೆಡಲ್, ಪಡಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ನಾರಾಯಣ ಆಚಾರ್ಯ ಕಾವು ಇವರು ತರಬೇತಿ ನೀಡಿದ್ದು, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ರವರು ಮಾರ್ಗದರ್ಶನ ನೀಡಿದ್ದಾರೆ. ಸ್ಮೃತಿ ಪಲ್ಲತ್ತಾರುರವರು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮತ್ತು ಉದ್ಯಮಿ ಪ್ರವೀಣ್ ಪಲ್ಲತ್ತಾರುರವರ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here