ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ನಡೆದ ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ದಸರಾ ಯೋಗ ಸ್ಪರ್ಧೆಯಲ್ಲಿ ವೀರಮಂಗಲ ಪಿಎಂಶ್ರೀ ಶಾಲಾ ಯೋಗ ಪಟುಗಳಾದ ವರ್ಷಾ, ಶ್ರೀದೇವಿ, ಚಿಂತನ, ಅನನ್ಯ, ಅಮೂಲ್ಯ,ಅನನ್ಯ ಚಿರಾಗ್, ಹಾರ್ದಿತ್,ಉದಿತ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ.ಕೆ ಇವರು ಮಕ್ಕಳಿಗೆ ತರಬೇತುಗೊಳಿಸಿದ್ದರು.