




ಪುತ್ತೂರು: ಸವಣೂರು ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಸವಣೂರು ಯುವಕ ಮಂಡಲ ಸದಸ್ಯರು, ರಾಜ್ಯ ಬಿಜೆಪಿ ಮಾಧ್ಯಮ ಪ್ರಮುಖರಾದ ಪ್ರಶಾಂತ್ ಕೆಡೆಂಜಿಯವರು ಕೊಡಮಾಡಿದ ಚಳಿಗೆ ಹಾಕುವ ಸ್ವೆಟರ್ ವಿತರಣೆ ನಡೆಯಿತು.




ಈ ಸಂದರ್ಭದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ಶೆಟ್ಟಿ, ಚಂದ್ರಾವತಿ ಸುಣ್ಣಾಜೆ, ಸವಣೂರು ಸಿ. ಎ. ಬ್ಯಾಂಕ್ ಉಪಾಧ್ಯಕ್ಷರು ಸವಣೂರು ಯುವಕ ಮಂಡಲದ ಅಧ್ಯಕ್ಷರಾದ ಚೇತನ್ ಕುಮಾರ್ ಕೋಡಿಬೈಲು, ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಸದಸ್ಯರಾದ ಸತೀಶ್ ಬಲ್ಯಾಯ, ಕಾರ್ಯಕರ್ತೆ ಹರ್ಷಿತಾ. ವೈ. ಸಹಾಯಕಿ ಗಂಗಮ್ಮ, ಮಕ್ಕಳ ಪೋಷಕಿ ರೋಶನಿ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.












