ವೇಣೂರು : ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಪದವಿ ಪೂರ್ವ ಕೆಮೆಸ್ಟ್ರಿ ಐಸ್ ಬ್ರೇಕಿಂಗ್ ಸ್ಪರ್ಧೆಯಲ್ಲಿ ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಚೇತನ್ , ಸಮ್ಯಕ್, ಪ್ರತೀಕ್ಷ್, ಆಸಿಫ್ , ಅಜಯ್ , ರಾಘವೇಂದ್ರ, ಅವಿನಾಶ್, ಶ್ರಾವಣಿ, ರಕ್ಷಿತಾ, ತನುಶ್ರೀ, ಅಕ್ಷತಾ, ಶರಣ್ಯ, ವಿಜೀಶಾ, ಟ್ರೀಸ, ಹಿಫಾ, ರಕ್ಷಿತಾ, ಅನುಷಾ, ಓಂಕಾರ್, ಸುಶಾಂತ್ ಮತ್ತು ಸಂಗೀತಾ ರನ್ನು ಒಳಗೊಂಡ ತಂಡ ಭಾಗವಹಿಸಿದ್ದರು.