ಪುತ್ತೂರು : ಪರ್ಲಡ್ಕ ಮುಹಿಯುದ್ದೀನ್ ಜುಮಾಮಸ್ಜಿದ್ ಆಶ್ರಯದಲ್ಲಿ ಶಂಸುಲ್ ಉಲಮಾ ಮೆಮೋರಿಯಲ್ ವುಮೆನ್ಸ್ ಶರಿಅತ್ ಕಾಲೇಜಿನ ಏಳನೇ ವಾರ್ಷಿಕ ಮತ್ತು ನಾಲ್ಕನೇ ಪದವಿ ಪ್ರದಾನ ಸಮಾರಂಭ ಜೂ.೪ರಂದು ಪರ್ಲಡ್ಕ ಶಂಸುಲ್ ಉಲಮಾ ವುಮೆನ್ಸ್ ಶರಿಅತ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸನದುದಾನ ಹಾಗೂ ಅನುಗ್ರಹ ಭಾಷಣವನ್ನು ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡುನ ಕಾರ್ಯದರ್ಶಿ ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ರವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಪುತ್ತೂರು ಮುದರ್ರಿಸ್ ಅಸೈಯದ್ ಅಹಮ್ಮದ್ ಪೂಕೋಯ ತಂಙಳ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಶಂಸುಲ್ ಉಲಮಾ ಮೆಮೊರಿಯನ್ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲ ಅಬೂಬಕ್ಕರ್ ಸಿದ್ದಿಕ್ ಅಲ್ಜಲಾಲಿ ನೆರವೇರಿಸಲಿದ್ದಾರೆ ಎಂದು ಕಾಲೇಜು ಸಮಿತಿ ಕಾರ್ಯದರ್ಶಿ ಪಿಎಸ್ ಹಂಝಾ ಹಾಜಿ ಮತ್ತು ಸಮಿತಿ ಅಧ್ಯಕ್ಷ ಅಬೂಬಕ್ಕರ್ ತಿಳಿಸಿದ್ದಾರೆ.