- ಅಧ್ಯಕ್ಷ: ಜಯಂತ ಪೂಜಾರಿ ನೆಕ್ಕಿಲಾಡಿ, ಕಾರ್ಯದರ್ಶಿ: ಧನಂಜಯ ನೈಯ್ಯಲ್ಗ
ಆಲಂಕಾರು: ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷರಾಗಿ ಜಯಂತ ಪೂಜಾರಿ ನೆಕ್ಕಿಲಾಡಿ, ಕಾರ್ಯದರ್ಶಿಯಾಗಿ ಧನಂಜಯ ನೈಯ್ಯಲ್ಗ ಆಯ್ಕೆಯಾಗಿದ್ದಾರೆ. ಆಲಂಕಾರಿನ ಪದ್ಮಶ್ರೀ ನಿಲಯದ ಹಾಲ್ನಲ್ಲಿ ಕೋಟಿ ಚೆನ್ನಯ ಮಿತ್ರವೃಂದ ಅಧ್ಯಕ್ಷ ಗಣರಾಜ್ ಆಲಂಕಾರು ರವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯಂತ ಪೂಜಾರಿ ನೆಕ್ಕಿಲಾಡಿ, ಕಾರ್ಯದರ್ಶಿಯಾಗಿ ಧನಂಜಯ ನೈಯ್ಯಲ್ಗ, ಕೋಶಾಧಿಕಾರಿಯಾಗಿ ವಿನಯ ಕೆದಿಲ, ಉಪಾದ್ಯಕ್ಷರಾಗಿ ಕೇಶವ ಕೇಪುಳು, ವಿಠಲ ಸಾಂತ್ಯ, ಜೂತೆ ಕಾರ್ಯದರ್ಶಿಯಾಗಿ ಡೊಂಬ್ಬಯ್ಯ ಸಾಂತ್ಯ, ಸಂಚಾಲಕರಾಗಿ ರವಿ ಮಾಯಿಲ್ಗ, ಗೌರವ ಸಲಹೆಗಾರರಾಗಿ ಸದಾನಂದ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿಯವರು ಹಿಂದು ಜಾಗರಣಾ ವೇದಿಕೆಯ ಸಕ್ರಿಯ ಪದಾದಿಕಾರಿಯಾಗಿ, ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಅಭಿನಂದನಾ ಚಿಕನ್ ಸೆಂಟರ್ನ ಮಾಲಕರಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.