ಪುತ್ತೂರು : ಕೆಎಸ್ಆರ್ಟಿಸಿ ಪುತ್ತೂರು ವಿಭಾಗದಲ್ಲಿ ಹಿರಿಯ ಚಾಲಕರಾಗಿ ನಿವೃತ್ತಿಹೊಂದಿದ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಹರಿಶ್ಚಂದ್ರ ಕೆ.ರವರಿಗೆ ಮುಕ್ರಂಪಾಡಿಯಲ್ಲಿರುವ ಪುತ್ತೂರು ಘಟಕದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಆ.೧ರಂದು ನಡೆಯಿತು. ಹರಿಶ್ಚಂದ್ರ ಕೆ.ರರ ಪತ್ನಿ ಯಶೋಧ, ಪುತ್ರರಾದ ಚೇತನ್, ಶೋಭಿತ್, ಹಿತೇಶ್, ನಾದಿನಿ ದೇವಕಿ, ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ಇಸ್ಮಾಯಿಲ್, ಲೆಕ್ಕಪರಿಶೋಧಕ ಜ್ಞಾನೇಶ್, ಎಟಿಎಸ್ಗಳಾದ ಪರಮೇಶ್ವರ, ಭಾಸ್ಕರ ತೊಕ್ಕೊಟ್ಟು, ತಾಂತ್ರಿಕ ಅಧಿಕಾರಿ ರಮೇಶ್ ರೈ ಹಾಗೂ ಹಿರಿಯ ಚಾಲಕರು, ಸಹೋದ್ಯೋಗಿಗಳು ಉಪಸ್ಥಿತರಿದ್ದರು.