ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಕೈಗಾರಿಕಾ ತರಬೇತಿ ( ITI )ವಿದ್ಯಾಲಯದ ವಿದ್ಯಾರ್ಥಿಗಳಿಂದ ಸ್ವಚ್ಚತೆ

0

 

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶಣದಲ್ಲಿ ಜ.೩೦-೩೧ರಂದು ನಡೆಯಲಿರುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವದ ಪ್ರಯುಕ್ತ ಶ್ರೀ ಗುರುದೇವ ವಿದ್ಯಾಪೀಠ ಹಾಗೂ ಕೈಗಾರಿಕಾ ತರಬೇತಿ ( ITI )ವಿದ್ಯಾಲಯದ ವಿದ್ಯಾರ್ಥಿಗಳಿಂದ ಶ್ರೀ ದೇವರ ರಥೋತ್ಸವ ಸಂಸಚರಿಸುವ ಪ್ರದೇಶವಾದ ಒಡಿಯೂರು ಸಂಸ್ಥಾ‌ನದಿಂದ ಆರಂಭಗೊಂಡು ಕನ್ಯಾನ, ಮಿತ್ತನಡ್ಕದ ತನಕ ಸ್ವಚ್ಚತೆ ನಡೆಯಿತು.

ಕ್ಷೇತ್ರದಲ್ಲಿ ಸ್ವಚ್ಚತೆಗೆ ಪ್ರಥಮ ಆಧ್ಯತೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ದೇವರ ವೈಭವದ ರಥ ಸಂಚರಿಸುವ ಹಾದಿಯನ್ನು ಸ್ವಚ್ಚಗೊಳಿಸಲಾಗಿದೆ. ಸ್ವಚ್ಚತಾ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here