ಪುತ್ತೂರು ಮಾಯಿದೆ ದೇವುಸ್ ಚರ್ಚ್ ನಲ್ಲಿ ಮಕ್ಕಳ ಭಾನುವಾರದ ಧರ್ಮೋಪದೇಶ ಉದ್ಘಾಟನೆ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ನಲ್ಲಿ ಬಲಿ ಪೂಜೆಯಲ್ಲಿ 2023- 24ನೇ ಸಾಲಿನ ವಾರ್ಷಿಕ ಧರ್ಮೊಪದೇಶ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.

ಪೂಜೆ ಆರಂಭದಲ್ಲಿ ಎಲ್ಲಾ ಧರ್ಮೋಪದೇಶ ಕಲಿಸುವ ಶಿಕ್ಷಕರು ಹಾಗೂ ಕೆಲ ವಿದ್ಯಾರ್ಥಿಗಳ ತಂದೆ ತಾಯಂದಿರು ಹಾಗೂ ಕೆಲ ಮಕ್ಕಳು ಗುರುಗಳೊಂದಿಗೆ ದೇವಾಲಯವನ್ನು ಪ್ರವೇಶಿಸಿದರು. ನಂತರ ಧರ್ಮೋಪದೇಶ ಕುರಿತು ಪ್ರಮುಖ ವಿಷಯಗಳನ್ನು ಸಾಂಕೇತಿಕ ರೀತಿಯಲ್ಲಿ ವ್ಯಕ್ತಪಡಿಸಿ ಧರ್ಮೋಪದೇಶವನ್ನು ಉದ್ಘಾಟನೆ ಮಾಡಿದರು.

ಉದ್ಘಾಟನೆಯ ಕೊನೆಯಲ್ಲಿ ಈ ವರ್ಷದ ಧರ್ಮೋಪದೇಶದ ಧ್ಯೇಯ “ಭಾನುವಾರದ ಧರ್ಮೋಪದೇಶದ ಶಿಕ್ಷಣ ಒಳ್ಳೆ ಕುಟುಂಬ ಕಟ್ಟಲು ಪ್ರೇರಣೆ” ಪ್ರೇಷಿತರ ವಿಶ್ವಾಸ ಸಂಗ್ರಹದ ನಂತರ ಎಲ್ಲಾ ಧರ್ಮೋಪದೇಶ ಕಳಿಸುವ ಶಿಕ್ಷಕರು ಪ್ರಮಾಣವಚನವನ್ನು ಸ್ವೀಕರಿಸಿದರು.

ದಿವ್ಯ ಬಲಿ ಪೂಜೆಯನ್ನು ಪ್ರದಾನ ಧರ್ಮ ಗುರು ಲಾರೆನ್ಸ್ ಮಸ್ಕರೇನಸ್ , ಸಹಾಯಕ ಧರ್ಮ ಗುರು ಲೋಹಿತ್ ಅಜಯ್ ಮಸ್ಕರೇನಸ್, ಮತ್ತು ರೂಪೇಶ್ ರವೀನ್ ತಾವ್ರೊ ನೆರವೇರಿಸಿದರು.

LEAVE A REPLY

Please enter your comment!
Please enter your name here