ಒಡಿಯೂರುಶ್ರೀ ವಿವಿಧ ಬಳಗದ ವಾರ್ಷಿಕೋತ್ಸವ-ಕೃತಜ್ಞತಾ ಸಭೆ

0

ಪುತ್ತೂರು: ಶ್ರೀಮಹಾಲಿಂಗೇಶ್ವರ ದೇವಾಲಯದ ಸಹಯೋಗದೊಂದಿಗೆ ಒಡಿಯೂರು ಶ್ರೀಗುರುದೇವಾ ಬಳಗ, ವಜ್ರಮಾತಾ ಮಹಿಳಾ ಮಂಡಳಿ, ಗ್ರಾಮ ವಿಕಾಸ ಯೋಜನೆ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಇವುಗಳ ಆಶ್ರಯದಲ್ಲಿ ಒಡಿಯೂರು ಶ್ರೀ ಬಳಗದ 16ನೆಯ ವಾರ್ಷಿಕೋತ್ಸವದ ಪ್ರಯುಕ್ತ ಓಡಿಯೂರು ಶ್ರೀಗಳ ಉಪಸ್ಥಿತಿಯಲ್ಲಿ ನಟರಾಜ ವೇದಿಕೆಯಲ್ಲಿ ನಡೆದ ಸತ್ಯದತ್ತ ವೃತ ಪೂಜಾ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದವರಿಗೆ ಕೃತಜ್ಞತಾ ಸಭೆ ಜೂ.12ರಂದು ಹೊಟೇಲ್ ಲಕ್ಷ್ಮೀ ಸಭಾಂಗಣದಲ್ಲಿ ನಡೆಯಿತು.

ದೀಪ ಪ್ರಜ್ವಲನೆಯನ್ನು ಹರಿಣಾಕ್ಷಿ ಜೆ.ಶೆಟ್ಟಿ ನೆರವೇರಿಸಿದರು. ಗುರುದೇವ ಸೇವಾ ಬಳಗದ ಹಿರಿಯರಾದ ಶ್ರೀದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ನಿತ್ಯ ಜೀವನದಲ್ಲಿ ಸೇವೆ ಹಾಗೂ ತ್ಯಾಗ ನಮ್ಮೆಲ್ಲರ ಧ್ಯೇಯವಾಗಿರಬೇಕು. ಗುರುದೇವರ ಸನ್ನಿಧಿಯಲ್ಲಿ ಸೇವೆ ಸಲ್ಲಿಸೋ ಭಾಗ್ಯ ಎಲ್ಲರಿಗೂ ಸಿಗಲ್ಲ. ನಿಮ್ಮೆಲ್ಲರ ಅವಿರತ ಶ್ರಮದ ಫಲದಿಂದ ಕಾರ್ಯಕ್ರಮ ಅದ್ಬುತ ಯಶಸ್ಸು ಕಂಡಿದೆಯೆಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಗುರು ದೇವಾ ಸೇವಾ ಬಳಗದ ಗೌರವ ಸಲಹೆಗಾರ ಜಯಪ್ರಕಾಶ್ ರೈ, ಹಿರಿಯರಾದ ಆಶೋಕ್ ಕುಮಾರ್ ರೈ, ಗುರುದೇವ ಸೇವಾ ಬಳಗದ ಜೊತೆ ಕಾರ್ಯದರ್ಶಿ ಭವಾನಿ ಶಂಕರ ಶೆಟ್ಟಿ, ವಿವೇಕಾನಂದ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲ ಗೋಪೀನಾಥ ಶೆಟ್ಟಿ, ಸವಿತಾ ರೈ, ಮಲ್ಲಿಕಾ ಜಯಣ್ಣ, ಪವಿತ್ರ ಪ್ರಸಾದ್, ಸವಿತಾ ರೈ, ತಾರಾ ಸುಂದರ ರೈ ಮತ್ತು ಸುನಂದ ರೈ ಹಾಗೂ ಶಶಿ ಡಿ. ಸುಜಾತ ಜಿ. ಸಹಿತ ಹಲವರು ಹಾಜರಿದ್ದರು. ಗುರುದೇವ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡಾ ವಂದಿಸಿದರು.

LEAVE A REPLY

Please enter your comment!
Please enter your name here