ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಆಳ್ವಾಸ್ ವಿದ್ಯಾಸಂಸ್ಥೆಯ ಚೇರ್ ಮ್ಯಾನ್ ಡಾ.ಮೋಹನ್ ಆಳ್ವ ಭೇಟಿ

0

ಪುತ್ತೂರು:ಸರಳತೆಯ ಸಾಕಾರ ಮೂರ್ತಿ, ಸಾಹಿತ್ಯ ಮತ್ತು ಕಲಾಪೋಷಕರಾದ ಮೂಡಬಿದ್ರೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಚೇರ್ ಮ್ಯಾನ್ ಡಾ.ಎಂ. ಮೋಹನ್ ಆಳ್ವರವರು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ನೀಡಿದರು.


ರೋಟರಿ ಕ್ಲಬ್ ಪುತ್ತೂರು ಇದರ ಪದಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಮೋಹನ್ ಆಳ್ವರವರು ವಿನಂತಿಯ ಮೇರೆಗೆ ತಡರಾತ್ರಿಯಾದರೂ ಕನ್ನಡ ಹಾಗೂ ಸಾಹಿತ್ಯ ಪರಿಷತ್ ಮೇಲಿನ ಅಭಿಮಾನದಿಂದ ಕಚೇರಿಗೆ ಆಗಮಿಸಿ ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಕುರಿತು ಪ್ರಶಂಸಿಸಿದರು .ಜೊತೆಗೆ ಕನ್ನಡ ಶಾಲೆಗಳ ಅಭಿವೃದ್ಧಿಯ ಕುರಿತು ಒಂದಿಷ್ಟು ಯೋಚನೆಗಳನ್ನು ನೀಡಿದರು. ಮುಂದಿನ ದಿನಗಳಲ್ಲಿ ಪುತ್ತೂರಿಗೆ ಆಗಮಿಸಿ ಈ ಕುರಿತು ವಿಸ್ತೃತ ಮಾತುಕತೆ ನಡೆಸುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಡಾ. ಮೋಹನ್ ಆಳ್ವ ಅವರಿಗೆ ಕನ್ನಡ ಪೇಟ ಹಾಗೂ ಶಾಲು ಪುಸ್ತಕವನ್ನು ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here