ಉಪ್ಪಿನಂಗಡಿ: ಶ್ರೀ ದೇವರಿಗೆ ಲಕ್ಷ ತುಳಸಿದಳ ಅರ್ಚನೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಅಧಿಕ ಮಾಸ ಪ್ರಯುಕ್ತ ಶ್ರೀ ದೇವರಿಗೆ ಲಕ್ಷ ತುಳಸಿ ಅರ್ಚನೆ ಮತ್ತು ಶ್ರೀ ಮಹಾಲಕ್ಷ್ಮೀ ದೇವರಿಗೆ ಕುಂಕುಮಾರ್ಚನೆ ಸೇವೆಯು ಶೃದ್ಧಾ ಭಕ್ತಿಯಿಂದ ನಡೆಯಿತು.


ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಮಾರ್ಗದರ್ಶನದಲ್ಲಿ ಕ್ಷೇತ್ರ ಪುರೋಹಿತರಾದ ರವೀಂದ್ರ ಭಟ್, ಸಂದೀಪ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಡಾ.ರತ್ನಾಕರ ಶೆಣೈ, ದೇವಿದಾಸ ಭಟ್ ಯು., ನಾಗರಾಜ ಭಟ್, ಕೆ. ಅನಂತರಾಯ ಕಿಣಿ ಪ್ರಮುಖರಾದ ಹರೀಶ್ ಪೈ, ಗಣೇಶ್ ನಾಯಕ್, ಏಕನಾಥ್ ಶೆಣೈ, ರಾಜೇಶ್ ಪೈ, ಕರಾಯ ರಾಘವೇಂದ್ರ ನಾಯಕ್, ವೆಂಕಟೇಶ್ ಕಿಣಿ, ನಾಗೇಶ್ ನಾಯಕ್, ವಿವೇಕಾನಂದ ಪ್ರಭು, ಅಶ್ವಿನ್ ಕಿಣಿ, ಪ್ರಪುಲ್ಲಾ ಆರ್ ನಾಯಕ್, ನಂದಿತಾ ಎಸ್ ಭಟ್, ಪೂಜಾ ಆರ್ ಪ್ರಭು, ರಂಜಿತಾ ಪೈ, ದೇವಾನಂದ ಶೆಣೈ, ಮಾಯಾ ಎಸ್ ಕಾಮತ್, ಶ್ರೇಯಾ ಎಸ್ ಕಾಮತ್ ಸಹಿತ ನೂರಾರು ಭಕ್ತಾಧಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here