ಆ.6 ಪರಿವಾರ ಬಂಟರ ಸಂಘದ ವತಿಯಿಂದ ‘ಕೆಸರ್ಡ್ ಒಂಜಿ ದಿನ’

0

ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯದ ವತಿಯಿಂದ ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ತೆಂಕಿಲದಲ್ಲಿರುವ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಸಮೀಪದ ಶಶಿಧರ್ ನಾಯ್ಕ್ ಇವರ ಗದ್ದೆಯಲ್ಲಿ ಆ.6ರಂದು ಬೆಳಿಗ್ಗೆ ‘ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮ ವಿವಿಧ ಸ್ಪರ್ಧೆಗಳೊಂದಿಗೆ ನಡೆಯಲಿದೆ. ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿರ್ದೇಶಕ ರತ್ನಾಕರ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿ ಮತ್ತು ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್ ಎ., ಕ್ಲಾಸ್ ವನ್ ಪಿ.ಡಬ್ಲ್ಯೂ.ಡಿ ಕಾಂಟ್ರಾಕ್ಟರ್ ಸಂದೀಪ್ ನಾಯ್ಕ್, ಕೆಸರು ಗದ್ದೆಗೆ ಸ್ಥಳಾವಕಾಶ ನೀಡಿದ ಶಶಿಧರ್ ನಾಯ್ಕ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಕೆಸರ್ಡ್ ಒಂಜಿ ದಿನ ಸ್ಪರ್ಧೆಯ ಹೆಚ್ಚಿನ ಮಾಹಿತಿಗೆ ಸರ್ವೇಶ್ ಪಾದೆ 9535038135, ಲಿಖಿತ್ ನಂದಿಲ 8904700782 ಇವರನ್ನು ಸಂಪರ್ಕಿಸಲು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here