ಮೋಡ ಕವಿದ ವಾತಾವರಣ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಸುಬ್ರಹ್ಮಣ್ಯ ಭೇಟಿ ಕಾರ್ಯಕ್ರಮ ರದ್ದು

0

ಪುತ್ತೂರು: ಮಾಜಿ ಪ್ರಧಾನಿ ಹೆಚ್. ಡಿ ದೇವೆಗೌಡ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ಭೇಟಿ ಕಾರ್ಯಕ್ರಮ ಇದೀಗ ರದ್ದುಗೊಂಡಿರುವುದಾಗಿ ವರದಿಯಾಗಿದೆ. ಸಕಲೇಶಪುರದಲ್ಲಿ ಭಾಗದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು ಹೆಲಿಕಾಪ್ಟರ್ ಬರಲು ಅನಾನುಕುಲ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಈ ದಿನದ ಕಾರ್ಯಕ್ರಮ ರದ್ದುಗೊಂಡಿರುವುದು ವರದಿಯಾಗಿದೆ. ಅ.8 ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಸಂಜೆ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಪೂಜೆ ಸಲ್ಲಿಸಿ, ರಾತ್ರಿ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡಿ, ಅ.9ರಂದು ಬೆಳಿಗ್ಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿತ್ತು.

LEAVE A REPLY

Please enter your comment!
Please enter your name here