ಡಿ.30,31ರಂದು ಪರಾರಿಗುತ್ತುವಿನಲ್ಲಿ ದೈವಂಕುಲು,ಕೊಡಮಣಿತ್ತಾಯ, ಮೈಸಂದಾಯ ಮತ್ತು ಸಪರಿವಾರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ನೇಮೋತ್ಸವ

0

ಆಲಂಕಾರು: ಪೆರಾಬೆ ಗ್ರಾಮದ ಪರಾರಿಗುತ್ತುವಿನಲ್ಲಿ ಡಿ.30ರಂದು ಬೆಳಿಗ್ಗೆ ‌ನಾಗತಂಬಿಲ ದೈವಂಕುಲು,ಮಹಿಷಂತ್ತಾಯ,ಕೊಡಮಣಿತ್ತಾಯ ದೈವಗಳಿಗೆ ಕಲಶ ಪರ್ವ, ಶಿರಾಡಿ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.ಡಿ.31ರಂದು ಅದಿತ್ಯವಾರ ಬೆಳಿಗ್ಗೆ ಗಣಹೋಮ,ಸತ್ಯನಾರಾಯಣ ದೇವರ ಪೂಜೆ,ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ ಸಂಜೆ ಕುಟುಂಬ ದೈವಗಳ ಭಂಡಾರ ಹಿಡಿದು ನೇಮೋತ್ಸವ ನಡೆಯಲಿದೆ.ಎಂದು ಪರಾರಿಗುತ್ತು ಯಜಮಾನ ಜನಾರ್ಧನ ರೈ ಮತ್ತು ಕುಟುಂಬಸ್ಥರು ಹಾಗು ವ್ಯವಸ್ಥಾಪಕರಾದ ಸುನಂದ ರೈ ಮತ್ತು ಮಕ್ಕಳು ಹಾಗೂ ಸದಾಶಿವ ರೈ ಮತ್ತು ಮಕ್ಕಳು ಪರಾರಿಗುತ್ತು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here