ಪಾಲ್ತಾಡು-ವಿಷ್ಣುನಗರ-ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯ ಸಂಪರ್ಕ ರಸ್ತೆ ಕಾಂಕ್ರೀಟೀಕರಣಕ್ಕೆ 10 ಲಕ್ಷ ರೂ ಅನುದಾನ – ಶಿಫಾರಸು ಮಾಡಿದ ಶಾಸಕ ಅಶೋಕ್ ರೈ

0

ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ವಿಷ್ಣುನಗರದಿಂದ ಕಾಪುತಕಾಡು ಶ್ರೀ ರಾಜ ಗುಳಿಗ ಸಾನಿಧ್ಯಕ್ಕೆ ಸಂಪರ್ಕಿಸುವ ಪ್ರಸ್ತುತ ಹದಗೆಟ್ಟಿರುವ ಕಚ್ಚಾ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕಾಂಕ್ರೀಟೀಕರಣ ಮಾಡಲು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಜ.1ರಂದು ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಾಸಕರು ಪುತ್ತೂರು ತಾಲೂಕಿಗೆ ಒಳಪಟ್ಟ ಪಾಲ್ತಾಡಿನಿಂದ ಆರಂಭವಾಗುವ ಕಡಿದಾದ ಏರುರಸ್ತೆಯ ಭಾಗವನ್ನು ಅಭಿವೃದ್ಧಿ ಪಡಿಸಲು 10 ಲಕ್ಷ ರೂ, ಅನುದಾನ ನೀಡಲು ಶಿಫಾರಸು ಮಾಡಿದ್ದು, ಅದಷ್ಟು ಬೇಗ ರಸ್ತೆ ಅಭಿವೃದ್ಧಿ ಪಡಿಸಲಾಗುವುದೆಂದು ಆಶ್ವಾಸನೆ ನೀಡಿದರು. ಈ ಮನವಿಗೆ 25 ಸ್ಥಳೀಯ ನಿವಾಸಿಗಳ ಸಹಿ ಸಂಗ್ರಹಿಸಲಾಗಿತ್ತು. ಈ ಸಂಪರ್ಕ ರಸ್ತೆಯ ಫಲಾನುಭವಿಗಳ ಪರವಾಗಿ ಮನವಿ ಸಲ್ಲಿಸಲಾಯಿತು
‌ಶಾಸಕರನ್ನು ಭೇಟಿ ಮಾಡಿದ ನಿಯೋಗಲ್ಲಿ ಕೊಳ್ತಿಗೆ ಪಂಚಾಯತ್ ಸದಸ್ಯ ಸುಂದರ, ಮಂಜಪ್ಪ ರೈ, ಶಶಿ ಕುಮಾರ್, ಡಾ.ಹರಿಕೃಷ್ಣ ರೈಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here