ಉಪ್ಪಿನಂಗಡಿ: 2025ನೇ ಸಾಲಿನ ಜೇಸಿಐ ಭಾರತದ ವಲಯ 15ರ ‘ಉದಕ’ ಪತ್ರಿಕೆಯ ಸಂಪಾದಕರಾಗಿ ಎರಡನೇ ಬಾರಿಗೆ ಉಪನ್ಯಾಸಕ ಮೋಹನ್ ಚಂದ್ರ ತೋಟದ ಮನೆ ಆಯ್ಕೆಯಾಗಿದ್ದಾರೆ.
ಜೇಸಿಐ ಉಪ್ಪಿನಂಗಡಿ ಘಟಕದ ಪೂರ್ವ ಅಧ್ಯಕ್ಷರಾಗಿರುವ ಇವರು ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ, ಅತ್ಯುತ್ತಮ ವಲಯ ಸಂಯೋಜಕ ಪ್ರಶಸ್ತಿ ಮತ್ತು ಜೇಸಿಐ ವಲಯ 15 ಕೊಡಮಾಡುವ ಸಾಧನಾ ಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಉಪನ್ಯಾಸಕ ವೃತ್ತಿಯ ಜೊತೆಗೆ ಕಾರ್ಯಕ್ರಮಗಳ ನಿರೂಪಕರಾಗಿಯೂ, ಪತ್ರಿಕೆಗಳ ವರದಿಗಾರನಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜೇಸಿಐ ಪ್ರಕಟನೆ ತಿಳಿಸಿದೆ.