ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ 20 ನೇ ಶಾಖೆ ಕಲ್ಲಡ್ಕದಲ್ಲಿ ಶುಭಾರಂಭ

0

ಪುತ್ತೂರು:ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ರಾಜ್ಯ ವ್ಯಾಪಿ ಕಾರ್ಯಕ್ಷೇತ್ರವನ್ನು ಹೊಂದಿರುವ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ 20 ನೇ ಶಾಖೆಯು ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕದ ಚೈತನ್ಯ ವ್ಯವಹಾರ ಸಂಕೀರ್ಣದ 1ನೇ ಮಹಡಿಯಲ್ಲಿ ಫೆ.7ರಂದು ಶುಭಾರಂಭಗೊಂಡಿತು.


ನೂತನ ಶಾಖೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ಇವರು ದೀಪ ಬೆಳಗಿಸಿ ಉದ್ಘಾಟಿಸಿ, ಸಹಕಾರಿ ಕ್ಷೇತ್ರವು ರಾಜಕೀಯ ಕ್ಷೇತ್ರಕ್ಕಿಂತಲೂ ಜನರಿಗೆ ಬಹಳ ಹತ್ತಿರವಾದ ಕ್ಷೇತ್ರವಾಗಿದೆ, ಜನರಿಗೆ ಆರ್ಥಿಕ ಶಕ್ತಿಯನ್ನು ನೀಡುವ ರಂಗ ಎನ್ನುವುದು ಎಂದು ಇದ್ದರೆ ಅದು ಸಹಕಾರಿ ರಂಗ, ಲಕ್ಷ್ಮೀಯ ಬೆನ್ನ ಹಿಂದೆ ಸರಸ್ವತಿ ನಿಂತರೆ ಸ್ವಚ್ಛವಾದ ವ್ಯವಹಾರ ನಡೆಯುತ್ತದೆ ಎಂದು ಹೇಳುತ್ತಾ ಸರಸ್ವತಿ ಸಹಕಾರಿಯು ಇನ್ನಷ್ಟು ಜನರಿಗೆ ಸಹಕಾರಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ರಾಜೇಶ್‌ ನಾಯ್ಕ್‌ ಇವರು ಆಗಮಿಸಿ ಶುಭ ಹಾರೈಸಿದರು. ಮಾಜಿ ಶಾಸಕ ರುಕ್ಮಯ ಪೂಜಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರೇಮ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ನಿರ್ದೇಶಕಿ ಭಾರತಿ ಜಿ. ಭಟ್‌, ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜು ಬಂಟ್ವಾಳ ಇದರ ನಿವೃತ್ತ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್‌, ಚೈತನ್ಯ ವ್ಯವಹಾರ ಸಂಕೀರ್ಣ ಇದರ ಮಾಲಕ ತಿರುಮಲೇಶ್ವರ ಭಟ್‌, ಸಂಯುಕ್ತ ಸಹಕಾರಿ ಇದರ ಡೆವೆಲಪ್‌ ಮೆಂಟ್‌ ಅಧಿಕಾರಿ ವಿಜಯ್ ಬಿ ಎಸ್‌ ಇವರು ಭಾಗವಹಿಸಿ ನೂತನ ಶಾಖೆಗೆ ಶುಭ ಹಾರೈಸಿದರು.


ಸಹಕಾರಿ ಸಂಘದ ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್‌ ಎ, ಹಾಗೂ ಆಡಳಿತ ಮಂಡಲಿಯ ಹಾಲಿ ಹಾಗೂ ಮಾಜಿ ಸದಸ್ಯರು ಸಿಬ್ಬಂದಿ ವರ್ಗದವರು ಸಹಕಾರಿ ಗ್ರಾಹಕರು ಉಪಸ್ಥಿತರಿದ್ದರು.


ನೂತನ ಕಲ್ಲಡ್ಕ ಶಾಖೆಯ ಶುಭಾರಂಭದ ಕಲ್ಲಡ್ಕ ಶಾಖೆಯ 1 ವರ್ಷದ ಠೇವಣಿಗೆ 8.75% ಹಾಗೂ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ ವಿಧವೆಯರಿಗೆ ಮತ್ತು ಯೋಧರಿಗೆ ಮತ್ತು ನೋಂದಾಯಿತ ಸಂಘ ಸಂಸ್ಥಗಳಿಗೆ 9.15% ಬಡ್ಡಿದರವನ್ನು ಫೆಬ್ರವರಿ 15 ತಾರೀಕಿನ ವರೆಗೆ ನಿಗದಿಪಡಿಸಲಾಗಿದೆ. ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ, ವಾಹನ ಸಾಲ, ಅಟೋ ಸಾಲ, ಗೃಹ ಸಾಲ, ಭೂ ಅಡಮಾನ ಸಾಲ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here