ಬೆಳ್ತಂಗಡಿ : ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ 2021-22 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಸೆ.17 ರಂದು ಬೆಳ್ತಂಗಡಿ ಕೆ. ಇ. ಬಿ. ರಸ್ತೆಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಬ್ಯಾಂಕಿನ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಳೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಬ್ಯಾಂಕ್ ನ ಉಪಾಧ್ಯಕ್ಷ ವಾಮನ ಗೌಡ, ನಿರ್ದೇಶಕರುಗಳಾದ ಎಂ. ಈಶ್ವರ ಭಟ್, ಶುಭಕರ ಪೂಜಾರಿ, ಕರಿಯ ನಾಯ್ಕ, ಶ್ರೀಧರ ಕೆ., ವಾಮನ ಬಾಳಿಗ, ವಿಜಯ, ಸಂತೋಷ ಕುಮಾರ್, ಲೋಕಯ್ಯ ಗೌಡ, ಶಂಕರ ವಿಠ್ಠಲ, ಎನ್., ಶೀಲಾ, ದಿನೇಶ, ವೆಂಕಪ್ಪಯ್ಯ ಉಪಸ್ಥಿತರಿದ್ದರು.
ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕರು ಗಿರಿಧರ್ ವರದಿ ವಾಚಿಸಿ ಸಭೆಯ ಕಲಾಪ ನಡೆಸಿದರು.