ಬೆಳ್ತಂಗಡಿ : ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನಲ್ ಪ್ರತಿನಿಧಿಗಳ ಸಭೆ ಅ.8 ರಂದು ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ನಡೆಯಿತು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರು ಸಂಪಾದಕ ಡಾ. ಯು. ಪಿ. ಶಿವಾನಂದ ಅಧ್ಯಕ್ಷತೆ ವಹಿಸಿದ್ದರು.
ಶಂಭು ಶರ್ಮ ಜೇನು ಕೃಷಿ ಬಗ್ಗೆ ಮತ್ತು ವಿಶ್ವನಾಥ ನಿಡ್ಲೆ ಆಧುನಿಕ ಕೃಷಿ ಕುರಿತು ಮಾಹಿತಿ ನೀಡಿದರು.
ಬೆಳ್ತಂಗಡಿ ಸುದ್ದಿ ಪತ್ರಿಕೆಯ ಸಿ. ಇ. ಒ. ಸಿಂಚನ ಊರುಬೈಲು, ವ್ಯವಸ್ಥಾಪಕ ಎನ್. ಮಂಜುನಾಥ್ ರೈ, ಚಾನಲ್ ಮುಖ್ಯಸ್ಥ ದಾಮೋದರ ದೊಂಡೋಲೆ , ಕೃಷಿ ವಿಭಾಗದ ರಾಜೇಶ್ ಪುತ್ತೂರು, ಪ್ರತಿನಿಧಿಗಳ ಮುಖ್ಯಸ್ಥ ಕೆ. ಎನ್. ಗೌಡ, ಸಿಬ್ಬಂದಿಗಳಾದ, ಜಾರಪ್ಪ ಪೂಜಾರಿ, ತುಕಾರಾಂ, ಈಶ್ವರ್ ಪಿ. ಎಚ್, ತಿಮ್ಮಪ್ಪ ಗೌಡ, ಸಂತೋಷ ಕೋಟ್ಯಾನ್, ಅಭಿಷೇಕ್, ಪ್ರತಿಭಾ, ಹಿತಶ್ರೀ, ಮೋಹಿನಿ, ಶ್ವೇತಾ, ದೀಪ್ತಿ, ಹಾಜರಿದ್ದರು, ತಾಲೂಕಿನ ವಿವಿಧ ಗ್ರಾಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.