ಸುಳ್ಯ ಮಹಶಿರ್ ಮತ್ಸ್ಯ ರೈತ ಉತ್ಪಾದಕರ ಮಂಡಳಿ ವತಿಯಿಂದ ಮೀನು ಸಾಕಾಣಿಕೆಯ ರೈತರಿಗೆ ಮೀನು ಮರಿಗಳ ವಿತರಣೆ

0

 

ಸುಳ್ಯದ ಮಹಶೀರ್ ಮತ್ಸ್ಯ ರೈತ ಉತ್ಪಾದಕ ಮಂಡಳಿ ವತಿಯಿಂದ ರೈತರಿಗೆ 60,000 ಮೀನುಮರಿ ಗಳನ್ನು ವಿತರಿಸಲಾಯಿತು.
ಸುಳ್ಯದ ಮಹಶೀರ್ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ ಮತ್ತು ಸಂಸ್ಥೆಯ ನಿರ್ದೇಶಕರ ಉಪಸ್ಥಿತಿಯಲ್ಲಿ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಮೀನು ಸಾಕಣೆಯ ಅರ್ಹ ರೈತರಿಗೆ ಮೀನು ಮರಿಗಳನ್ನು ತಾ.ಪಂ. ಸಭಾಭವನದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಮಹಶಿರ್ ಮತ್ಸ್ಯ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರುಗಳಾದ ಸುಪ್ರೀತ್ ಮೋಂಟಡ್ಕ, ಅಶೋಕ ಅಡ್ಕಾರು, ನವೀನ್ ಚಾತುಬಾಯಿ, ಪ್ರಶಾಂತ್ ಅಂಬೆಕಲ್ಲು, ಸುಧಾಕರ ಎ. ಜಿ., ಶಶಿಕಲಾ ನಿರಬೀದಿರೆ, ವಿಜೇತ್ ಅಡ್ಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನುಷ್ ಪೆರುಂಬಾರು, ಮೀನು ಸಾಕಾಣಿಕೆ ರೈತರುಗಳಾದ ವರ್ಷಿತ್ ತಳೂರು, ಸೋಜಾ ಜೋನ್, ದಿವಾಕರ ಹುಲಿಮನೆ, ರಾಘವ ಪೆರಾಜೆ, ತುಷಾರ್ ಪೆರಾಜೆ, ಬಾಲ ಬೈತಡ್ಕ, ಗೋಪಿನಾಥ್, ದಿನೇಶ್, ಮಿಲನ್ , ನಿಶಾಂತ್, ಪ್ರವೀಣ, ಗಿರೀಶ್ ಪೆರುಮುಂಡ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here