ಬಿಎಂಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದಲ್ಲಿ 73 ನೇ ಗಣರಾಜ್ಯೋತ್ಸವ

0

ಪುತ್ತೂರು : 73ನೇ ವರ್ಷದ ಗಣರಾಜ್ಯೋತ್ಸವನ್ನು ಧ್ವಜಾರೋಹಣದ ಮೂಲಕ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಸೇನೆಯ ನಿವೃತ್ತ ಯೋಧರಾದ ಶ್ರೀಯುತ ವಸಂತಕುಮಾರ್ ನೆರವೇರಿಸಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಜೇಶ್ ಮರೀಲ್ ಇವರು ವಹಿಸಿದ್ದರು. ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಸುಧಾಕರ್ ನಾಯಕ್ ರವರು ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಗೌರವ ಅಧ್ಯಕ್ಷರಾದ ಬಿಕೆ ದೇವಪ್ಪಗೌಡ ರವರು ಉಪಸ್ಥಿತರಿದ್ದರು ನೂರಕ್ಕೂ ಹೆಚ್ಚು ರಿಕ್ಷಾ ಚಾಲಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ಕಾರ್ಯಕ್ರಮಕ್ಕೆ ಲಘು ಉಪಹಾರದ ವ್ಯವಸ್ಥೆಯನ್ನು ಸಂಘದ ಗೌರವಾಧ್ಯಕ್ಷರಾದ  ಎಂ ಕೆ ಪ್ರಸಾದ್ ರವರು ನೀಡಿರುತ್ತಾರೆ. ಮಾಜಿ ಕಾರ್ಯದರ್ಶಿಯಾದ ಮಹೇಶ್ ಪ್ರಭು ಮಣಿಯ ಸ್ವಾಗತಿಸಿ. ಮಾಜಿ ಅಧ್ಯಕ್ಷರಾದ ಭಾಸ್ಕರ್ ನಾಯ್ಕ್ ವಂದಿಸಿದರು. ಮಾಜಿ ಅಧ್ಯಕ್ಷರಾದ ಸತೀಶ್ ಪ್ರಭು ಮಣಿಯ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here