ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರ ಸಭೆ

0

  • ನಾಳೆ(ಜ.28)  ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ಪುನಾರಂಭ

ಕಾಣಿಯೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರಶ್ನಾ ಚಿಂತನೆಯ ಬಗ್ಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಯಿತು. ಜ 28ರಿಂದ ಕ್ಷೇತ್ರದಲ್ಲಿ ಮತ್ತೆ ಪ್ರಶ್ನಾಚಿಂತನೆ ಪುನರಾರಂಭಗೊಳ್ಳಲ್ಲಿದ್ದು, ಪ್ರಶ್ನಾ ಚಿಂತನೆ ಮುಗಿದ ಬಳಿಕ ಪರಿಹಾರದ ಭಾಗವನ್ನು ಶೀಘ್ರವಾಗಿ ಮುಗಿಸಿ ಜೀರ್ಣೋದ್ಧಾರದ ಕಾರ್ಯಕ್ಕೆ ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.


ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ಕೆ.ಎನ್.ಕಾರ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಭಕ್ತರ ಮುಂದಿಟ್ಟು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ದೇವಸ್ಥಾನದ ಮೊಕ್ತೇಸರರಾದ ಜನೇಶ್ ಭಟ್ , ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಎ.ಪಿ.ಎಂ.ಸಿ ಅಧ್ಯಕ್ಷ ದಿನೇಶ್ ಮೆದು, ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಚೆನ್ನಪ್ಪ ಗೌಡ ನೂಜಿ, ಚಂದ್ರಶೇಖರ ರಾಶಿ ಕಾಂಪ್ಲೆಕ್ಸ್ ಬರೆಪ್ಪಾಡಿ, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು , ನಾಗೇಶ್ ಕೆಡೆಂಜಿ, ಸುಬ್ರಾಯ ಕೆರೆನಾರು, ಸುಬ್ರಾಯ ಹೊಸೊಕ್ಲು , ಮೇದಪ್ಪ ಕುವೆತ್ತೊಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತಪ್ಪ ಗೌಡ ಕುವೆತ್ತೊಡಿ, ಶ್ರೀಧರ ಕೊಯಕ್ಕುಡೆ, ನಿರ್ಮಲ ಕೇಶವ ಅಮೈ, ಪುಷ್ಪಲತಾ ಪದ್ಮಯ್ಯ ದರ್ಖಾಸು , ಯಶೋಧ ಎರ್ಕಮೆ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here