ಪುತ್ತೂರು: ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಗೆ ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಜ.26ರಂದು ಅಭಿನಂದನೆ, ಗುರುಕಾಣಿಕೆ ಸಮರ್ಪಣೆ ಮಾಡಲಾಯಿತು.
ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯ ಸಮಿತಿ ಹಾಗೂ ಯುವ ಸಮಿತಿಯ ಪ್ರಮುಖರು ಮಂಗಳೂರು ಕಾವೂರಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರನ್ನು ಡಾಕ್ಟರೇಟ್ ಪದವಿ ಪಡೆದಿರುವುದಕ್ಕೆ ಅಭಿನಂದಿಸಿ ಗುರುಕಾಣಿಕೆ ಸಮರ್ಪಣೆ ಮಾಡಿದರು. ನಾಗಪ್ಪ ಗೌಡ ಮರುವಂತಿಲ, ಈಶ್ವರ ಗೌಡ ಪಜ್ಜಡ್ಕ, ಲಿಂಗಪ್ಪ ಗೌಡ ಕಡೆಂಬಿಲ, ಪದ್ಮಪ್ಪ ಗೌಡ ರಾಮಕುಂಜ, ಚಕ್ರಪಾಣಿ ಗೌಡ ಬಾಕಿಲ, ರಾಮಣ್ಣ ಗೌಡ ದೋಳ, ದಯಾನಂದ ಗೌಡ ಆಲಡ್ಕ, ಪ್ರಕಾಶ್ ಗೌಡ ಬಾಕಿಲ, ರಾಮಣ್ಣ ಗೌಡ ಸುರುಳಿ, ಆನಂದ ಗೌಡ ಪಜ್ಜಡ್ಕ, ಅಶೋಕ ಗೌಡ ಪಜ್ಜಡ್ಕ, ಶೇಖರ ಗೌಡ ಕಟ್ಟಪುಣಿ, ತಿಮ್ಮಪ್ಪ ಗೌಡ ಸಂಕೇಶ, ಸದಾನಂದ ಕುಂಟ್ಯಾಣ, ವಾಸುಗೌಡ ಮಾಯಿಲ್ಗ, ದೇವಪ್ಪ ಗೌಡ ಬರೆಂಬೆಟ್ಟು, ಮಂಜಪ್ಪ ಗೌಡ ಕುಂತೂರು ಮತ್ತಿತರರು ಉಪಸ್ಥಿತರಿದ್ದರು.