ಕೊಣಾಲು: ವಿವಾಹಕ್ಕೆ ನೆಲ್ಯಾಡಿ ಬಂಟರ ಸಂಘದಿಂದ ಆರ್ಥಿಕ ನೆರವು

0

ನೆಲ್ಯಾಡಿ: ಕಡಬ ತಾಲೂಕು ಕೊಣಾಲು ಗ್ರಾಮದ ಲೋಕಯ್ಯ ಶೆಟ್ಟಿ ಹಾಗೂ ಲೀಲಾವತಿ ದಂಪತಿಯ ಪುತ್ರಿ ಪ್ರಮೀಳಾರವರ ವಿವಾಹಕ್ಕೆ ನೆಲ್ಯಾಡಿ ವಲಯ ಬಂಟರ ಸಂಘದ ಆಶ್ರಯದಲ್ಲಿ ಸಂಗ್ರಹವಾದ ಧನ ಸಹಾಯವನ್ನು ಇತ್ತೀಚೆಗೆ ಅವರ ಮನೆಗೆ ತೆರಳಿ ಹಸ್ತಾಂತರ ಮಾಡಲಾಯಿತು.

 


ಪುತ್ತೂರು ತಾಲೂಕು ಬಂಟರ ಸಂಘದ ಮಾರ್ಗದರ್ಶನದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಸಂಚಾಲಕ ಸತೀಶ್ ರೈ ಕೊಣಾಲುಗುತ್ತುರವರ ಮುಂದಾಳತ್ವದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಆರ್ಥಿಕ ನೆರವು ಯಾಚಿಸಿ ಸುಮಾರು ೪೬ ಸಾವಿರ ರೂ.ಸಂಗ್ರಹಿಸಲಾಯಿತು. ಈ ಮೊತ್ತವನ್ನು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತೃತ್ವದಲ್ಲಿ ಪ್ರಮೀಳಾರವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ, ಸಂಚಾಲಕ ಸತೀಶ್ ರೈ ಕೊಣಾಲುಗುತ್ತು, ಸಹ ಸಂಚಾಲಕ ಜಯಾನಂದ ಬಂಟ್ರಿಯಾಲ್, ಕಾರ್ಯದರ್ಶಿ ವಾಣಿಸುಂದರ ಶೆಟ್ಟಿ ನೆಲ್ಯಾಡಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಉಪಾಧ್ಯಕ್ಷ ಪ್ರವೀಣ್ ಭಂಡಾರಿ, ಕರುಣಾಕರ ಶೆಟ್ಟಿ ಉಪ್ಪಿನಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here