ಪುತ್ತೂರು: ಮಂಜಲ್ಪಡ್ಪುವಿನಲ್ಲಿ ಬುಲೆಟ್ ಬೈಕ್ ಅಪಘಾತಗೊಂಡು ಬೈಕ್ ಸವಾರ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ ಅವರು ತೀವ್ರ ಗಾಯಗೊಂಡಿದ್ದಾರೆ.
ಗಾಯಳು ಗಿರಿಧರ ನಾಯ್ಕ ಅವರಿಗೆ ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ರಸ್ತೆ ದಾಟುತ್ತಿದ್ದ ಮಗುವಿನ ರಕ್ಷಣೆಗೆಂದು ಬುಲೆಟ್ ಬೈಕ್ ನಲ್ಲಿದ್ದ ಗಿರಿಧರ ನಾಯ್ಕ ಅವರು ಅಪಘಾತಕೊಳಗಾಗಿದ್ದಾರೆ.