ಆಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಕದಿರು ಕಟ್ಟುವ ಕಾರ್ಯಕ್ರಮ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ ಆರಂಭದ ದಿನವಾದ ಇಂದು ಬೆಳಗ್ಗೆ ಕದಿರು ಕಟ್ಟುವ ಕಾರ್ಯಕ್ರಮ ನಡೆಯಿತು.
ದೇವಳದ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರು ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಕದಿರು ಕಟ್ಟಿದರು.


ಈ ಸಂದರ್ಭದಲ್ಲಿ ಅರ್ಚಕ ಸುಬ್ರಾಯ ಭಟ್ ,ಅನುವಂಶಿಕ ಮೊಕ್ತೇಸರ ಶ್ರೀಪತಿ ಬೈಪಡಿತ್ತಾಯ, ಜೀ.ಸ.ಅಧ್ಯಕ್ಷ ಎನ್.ಎ. ರಾಮಚಂದ್ರ, ವ್ಯವಸ್ಥಾಪನಾ ಸದಸ್ಯ ಅಚ್ಚುತ ಮಣಿಯಾಣಿ ಆಲೆಟ್ಟಿ, ಸೇ.ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಭಜನಾ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ,ಸದಸ್ಯರಾದ ಲಕ್ಷ್ಮಣ ಗೌಡ ಆಲೆಟ್ಟಿ, ಸುಧಾಕರ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ಮಹಾಬಲ ರೈ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ,ವಿಜಯ ಕುಮಾರ್ ಆಲೆಟ್ಟಿ, ಶಂಕರ ಪಾಟಾಳಿ ಆಲೆಟ್ಟಿ, ಸಂಜೀವ ನೂಜಿನಮೂಲೆ,‌ ಆಶಿಕ್ ರೈ ಮೊರಂಗಲ್ಲು, ಜಯರಾಮ ಮೊರಂಗಲ್ಲು, ಸತೀಶ್ ಗಬ್ಬಲ್ಕಜೆ, ಬಾಲಕೃಷ್ಣ ರೈ ಆಲೆಟ್ಟಿ, ಶ್ರೀಮತಿ ಯಶೋಧ ಗುಂಡ್ಯ, ಯಮುನಾ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here