ಕೆದಂಬಾಡಿ ಮತ್ತು ಕುಂಬ್ರ ಸಹಕಾರ ಸಂಘದ ನಿವೃತ್ತ ಸಿಇಓ ಗಳಿಗೆ ಸನ್ಮಾನ

0

ಪುತ್ತೂರು;  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20  ಅಂಶಗಳ ಸಭೆಯಲ್ಲಿ ಸುಮಾರು 37 ವರ್ಷಗಳ ಕಾಲ ಕೆದಂಬಾಡಿ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಹಂಸಾವತಿ ಹಾಗೂ ಕುಂಬ್ರ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 34 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ರಾಜೀವಿ ರೈ ರವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

 


ಈ ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್.ಬಿ. ಜಯರಾಮ ರೈ ವಹಿಸಿದ್ದರು. ಶ್ರೀಮತಿ ಹಂಸಾವತಿ ಮತ್ತು  ರಾಜೀವಿ ರೈ ರವರನ್ನು ಶಾಲು, ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು,. ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾದಶಶಿಕುಮಾರ್ ರೈ ಬಾಲ್ಯೊಟ್ಟು ನಿವೃತ್ತರ ಕಾರ್ಯವೈಖರಿಯನ್ನು ಅಭಿನಂದಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾದ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಂಧಕರಾದ ಶ್ರೀಮತಿ ಸುಕನ್ಯಾ ರವರು ನಿವೃತ್ತರ ಸೇವೆಯನ್ನು ಕೊಂಡಾಡಿ ಶುಭ ಹಾರೈಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕರಾದ  ರತ್ನಕುಮಾರ್, ಸಹಕಾರಿ ಅಬಿವೃದ್ದಿ ಅಧಿಕಾರಿ  ಶೋಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನಿತರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಕುಂಬ್ರ ಸಹಕಾರ ಸಂಘದ ನೂತನ ಸಿಇಓ ಶ್ರೀಮತಿ ಭವಾನಿ ರವರನ್ನು ಎ.ಆರ್ ಶ್ರೀಮತಿ ಸುಕನ್ಯಾ ಹೂಗುಚ್ಚ ನೀಡಿ ಗೌರವಿಸಿದರು. ಆಲಂಕಾರಿನ ಸಿಇಒ ಪ್ರಶಾಂತ್ ರೈ ಮತ್ತು ಬೆಟ್ಟಂಪಾಡಿಯ ಸಿಇಒ ರಾಮಯ್ಯ ರೈ ಸನ್ಮಾನಿತರನ್ನು ಪರಿಚಯಿಸಿದರು. ಇದೇ ಸಂದಂರ್ಭದಲ್ಲಿ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದ ಚಾರ್ವಕದ ಸಿಇಒ ಅಶೋಕ ಗೌಡರನ್ನು ಸಭಾದ್ಯಕ್ಷರು ಅಬಿನಂದಿಸಿದರು.

ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ  ವಸಂತ ಎಸ್. ಮತ್ತು ಶರತ್ ಹಾಗೂ ಪುತ್ತೂರು ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ, ಮುಂಡೂರಿನ ಜಯಪ್ರಕಾಶ ರೈ, , ಬನ್ನೂರಿನ ಗೋಪಾಲಕೃಷ್ಣ ಭಟ್, ನರಿಮೊಗರಿನ ಮಧುಕರ್, ನೆಲ್ಯಾಡಿಯ ದಯಾಕರ್ ರೈ , ಕೊಳ್ತಿಗೆಯ  ಹಂಸಾವತಿ, ಕಡಬದ ಚಾಕೋ, ಬಲ್ನಾಡಿನ ಸೀತಾರಾಮ ಗೌಡ , ಆರ್ಯಾಪಿನ  ಜಯಂತಿ, ಉಪ್ಪಿನಂಗಡಿಯ  ಕ್ಲೇರಿ ವೇಗಸ್, ಪಾಣಾಜೆಯ ಲಕ್ಷ್ಮಣ ನಾಯ್ಕ್, ಬಿಳಿನೆಲೆಯ  ಸುಜಾತ, ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯ ರೈ ಉಪಸ್ಥಿತರಿದ್ದರು. ಸವಣೂರಿನ ಸಿಇಓ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿ, ಕಾವು ಸಹಕಾರ ಸಂಘದ ಕೇಶವ ಮೂರ್ತಿರವರು ವಂದಿಸಿದರು.

LEAVE A REPLY

Please enter your comment!
Please enter your name here