ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಕುಯ್ಯಾರು ಎಂಬಲ್ಲಿ ನೂತನವಾಗಿ ನಿರ್ಮಿಸಿದ `ಶ್ರೇಷ್ಠ ನಿಲಯ’ದ ಗೃಹಪ್ರವೇಶ ಹಾಗೂ ಯಕ್ಷಗಾನ ತಾಳಮದ್ದಳೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆ.10 ರಂದು ನಡೆಯಿತು. ಬೆಳಿಗ್ಗೆ ಅರ್ಚಕ ಪಟ್ಲಮೂಲೆ ಶ್ರೀಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ಶ್ರೀ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹಪ್ರವೇಶ ನಡೆಯಿತು. ಇದೇ ಸಂದರ್ಭದಲ್ಲಿ ಬೋಳಂತೂರುಗುತ್ತು ಮಹಾಬಲ ಶೆಟ್ಟಿಯವರ ಸ್ಮರಣಾರ್ಥ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ದೇಲಂಪಾಡಿ ಇವರಿಂದ ಯಕ್ಷಗಾನ ತಾಳಮದ್ದಳೆ `ಶರಸೇತು’ ನಡೆಯಿತು.
ಸಾಧಕರಿಗೆ ಗೌರವಾರ್ಪಣೆ
ಬೋಳಂತೂರುಗುತ್ತು ಮಹಾಬಲ ಶೆಟ್ಟಿಯವರ ಸ್ಮರಣಾರ್ಥ ವಿವಿಧ ಕ್ಷೇತ್ರದ ಸಾಧಕರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ನಡೆಯಿತು. ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರುಗಳಾದ ಎ.ಚಿಕ್ಕಪ್ಪ ನಾಕ್, ಎ.ಜಿ ವಿಜಯ ಕುಮಾರ್ ರೈ ಮುಗೇರು, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಅಮ್ಮು ಪೂಂಜ ಮುಡಾಲ, ಉದ್ಯಮಿ ಪುರಂದರ ರೈ ಮಿತ್ರಂಪಾಡಿ, ಸಂಕಪ್ಪ ರೈ ಕಲ್ಲಡ್ಕ ಬೊಟ್ಯಾಡಿಗುತ್ತು, ಕುಯ್ಯಾರು ಪುರಂದರ ರೈ ಕುರಿಕ್ಕಾರ, ಡಾ.ಮುರಳೀಕೃಷ್ಣ ರೈ ಚಿರಾಯು ಕ್ಲಿನಿಕ್, ಸುಂದರ ರೈ ಮಂದಾರ ಮತ್ತು ಉದಯ ರೈ ಮಂದಾರರವರುಗಳನ್ನು ಶಾಲು,ಸ್ಮರಣಿಕೆ,ಫಲಪುಷ್ಪ ನೀಡಿ ಗೌರವಿಸಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ತಂಡ ಮತ್ತು ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನಿ ಎಲ್.ಶೆಟ್ಟಿ, ಕಯ್ಯಾರುಪಾದೆ ಸೀತಾರಾಮ ರೈ ಕಲ್ಲಡ್ಕಗುತ್ತು ದೇಲಂಪಾಡಿ, ಗಣೇಶ್ ರೈ ಶೀಂಟೂರುಗುತ್ತು, ಕಿಟ್ಟಣ್ಣ ರೈ ಎಂಜಿರಬೀಡು ಮಡ್ಯಂಪಾಡಿ, ಬಾಲಕೃಷ್ಣ ಆಳ್ವ ಕಯ್ಯಾರುಪಾದೆ, ಸೀತಾರಾಮ ರೈ ಚೆಲ್ಯಡ್ಕ, ಬಾರಿಕೆ ನಾರಾಯಣ ರೈ, ಪ್ರಕಾಶ್ಚಂದ್ರ ರೈ ಕೈಕಾರ, ರಾಜೇಶ್ ರೈ ಪರ್ಪುಂಜ, ಯುವರಾಜ್ ರೈ ಮೇರ್ಲ, ಮೋಹನ್ ಗೌಡ, ಜೆ.ಕೆ ವಸಂತ ಗೌಡ, ರಕ್ಷಿತ್ ರೈ ಮುಗೇರು, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಬಿ.ಸಿ ಚಿತ್ರ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಸದಸ್ಯೆ ಸುಜಾತ ರೈ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಅತಿಥಿಗಳನ್ನು ಕಯ್ಯಾರುಪಾದೆ ಸರೋಜಿನಿ ಮಹಾಬಲ ಶೆಟ್ಟಿ ಮತ್ತು ಮಕ್ಕಳು, ಬೋಳಂತೂರುಗುತ್ತು ಲಲಿತಾ ಮತ್ತು ಕಿಟ್ಟಣ್ಣ ರೈ ಮತ್ತು ಮಕ್ಕಳು, ತಾರಾನಾಥ ಶೆಟ್ಟಿ ಬೋಳಂತೂರುಗುತ್ತು, ಸೌಮ್ಯ ಶೆಟ್ಟಿ ಮತ್ತು ಮಕ್ಕಳು ಸ್ವಾಗತಿಸಿ ಸತ್ಕರಿಸಿದರು.