ಪುತ್ತೂರು; ಬೆಳ್ತಂಗಡಿಯ ಮುಂಡಾಜೆಯಲ್ಲಿರುವ ತನ್ನ ಅಜ್ಜಿಯ ಮನೆ ತೆರಳಿದ್ದ ಕಬಕ ಗ್ರಾಮದ ನೆಹರು ನಗರ ಸಿಟಿ ಗುಡ್ಡೆಯ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಫೆ.20ರಂದು ನಡೆದಿದೆ. ಕಬಕ ಗ್ರಾಮದ ನೆಹರು ನಗರ ಸಿಟಿಗುಡ್ಡೆ ಸುಂದರ ನಾಯ್ಕರವರ ಪುತ್ರ ಕಿರಣ್(20ವ.) ಮೃತಪಟ್ಟ ಯುವಕ. ಗಾರೆ ಕೆಲಸ ಮಾಡುತ್ತಿರುವ ಕಿರಣ್ ಫೆ.20 ರಂದು ಬೆಳ್ತಂಗಡಿಯ ಮುಂಡಾಜೆ ಸಮೀಪದ ಸೋಮಂತಡ್ಜದಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದರು. ಅಲ್ಲಿ ಅವರು ಸಂಜೆ ತನ್ನ ಸಂಬಂಧಿಕರ ಜೊತೆಗೆ ಪರಮುಖ ಎಂಬಲ್ಲಿರುವ ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿರುವ ವೇಳೆ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದರು ಎನ್ನಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ, ಸ್ಥಳಿಯರ ಸಹಕಾರದೊಂದಿಗೆ ಮೃತ ದೇಹದ ಹುಡುಕಾಟ ನಡೆಸಿದ್ದಾರೆ. ಫೆ.21ರಂದು ಮೃತದೇಹ ಪತ್ತೆಯಾಗಿದೆ.