ಪುತ್ತೂರು: ಆರ್ಯಾಪು ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಯ ಸಭೆ ಅಧ್ಯಕ್ಷ ಎಚ್. ಮಹಮ್ಮದ್ ಅಲಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸಭೆಯಲ್ಲಿ ಬೆಂಬಲ ಸೂಚಿಸಲಾಯಿತು. ಅಲ್ಲದೆ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕರಿಸಲಾಯಿತು. ಬ್ಯಾಂಕ್ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಜಯಂತಿ ಬಾಸ್ಕರ್, ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ನಿರ್ದೇಶಕರುಗಳಾದ ಸುರೇಂದ್ರ ರೈ ಬಳ್ಳಮಜಲು, ಶೀನಪ್ಪ ಮರಿಕೆ, ಸತೀಶ್ ನಾಯ್ಕ್ ಪರ್ಲಡ್ಕ, ಗಣೇಶ್ ರೈ ಮೂಲೆ ಆರ್ಯಾಪು, ಇಸ್ಮಾಯಿಲ್ ಮಲಾರ್, ಗಣೇಶ್ ರೈ ಕುರಿಯ, ಚಂದ್ರಕಲಾ ಕುರಿಯ, ಸಂಶುದ್ದೀನ್ ನೀರ್ಪಾಜೆ, ತಿಮ್ಮಪ್ಪ ನಾಯ್ಕ್ ಜಂಗಮುಗೇರು, ಸಿಬ್ಬಂದಿಗಳಾದ ಶುಭಾಶಿನಿ, ಅಜಿತ್ ರೈ, ಪ್ರಶಾಂತಿನಿ, ಸಪ್ನ ಉಪಸ್ಥಿತರಿದ್ದರು.