ಮರ್ದಾಳ ಪರಿಸರದಲ್ಲಿ ಕಳ್ಳರ ಕೈಚಳಕ

0

ಕಡಬ: ಕಳೆದ ಹಲವು ಸಮಯಗಳಿಂದ ಸೈಲೆಂಟ್ ಆಗಿದ್ದ ಕಳ್ಳರು ಇದೀಗ ಕಡಬ ಪರಿಸರದಲ್ಲಿ ತಮ್ಮ‌ಕೈಚಳಕವನ್ನು ತೋರಿಸಿದ್ದಾರೆ.

ಬಂಟ್ರ ಗ್ರಾಮದ ಚಾಕೋಟೆಕೆರೆ ನಿವಾಸಿ ಅಶ್ರಫ್ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯಿಡೀ ಜಾಲಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಅರಿತವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಈ ನಡುವೆ ಪಾಲೆತ್ತಡ್ಕ ನಿವಾಸಿ ಮರ್ದಾಳದಲ್ಲಿ ಅಂಗಡಿ ಹೊಂದಿರುವ ಬಾಲಕೃಷ್ಣ ರೈ ಎಂಬವರ ಮನೆಗೂ ನುಗ್ಗಿರುವ ಕಳ್ಳರು ನಗದನ್ನು ದೋಚಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here