ಸೇಡಿಯಾಪು ಫ್ರೆಂಡ್ಸ್ ಕ್ಲಬ್ ನ ಕಬಡ್ಡಿ ಪಂದ್ಯಾಟ, ವೈದ್ಯಕೀಯ ಶಿಬಿರ, ನೇತ್ರದಾನ ನೋಂದಾವಣೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಸೇಡಿಯಾಪು ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ಕೋಡಿಂಬಾಡಿಯ ಸೇಡಿಯಾಪು ಕ್ರೀಡಾಂಗಣದಲ್ಲಿ ಮಾರ್ಚ್ 6ರಂದು ನಡೆಯಲಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಮಂಗಳೂರಿನ ಯೇನಪೋಯ ಸಂಸ್ಥೆಯ ಸಹಕಾರದೊಂದಿಗೆ ಜರಗಲಿರುವ ಉಚಿತ ವೈದ್ಯಕೀಯ ಶಿಬಿರ, ಚಿಕಿತ್ಸಾ ಶಿಬಿರ, ನೇತ್ರದಾನ ನೋಂದಾವಣೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಫೆ.23ರಂದು ಕ್ರೀಡಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಕುಲಾಲ್, ಪ್ರಧಾನ ಕಾರ್ಯದರ್ಶಿ ಸತೀಶ್ ಮಡಿವಾಳ, ಗೌರವಾಧ್ಯಕ್ಷ ಜಯಪ್ರಕಾಶ್ ಬದಿನಾರು, ಜೊತೆ ಕಾರ್ಯದರ್ಶಿ ಪವನ್, ಸದಸ್ಯರಾದ ಇಬ್ರಾಹಿಂ ಸೇಡಿಯಾಪು, ವಿನೋದ್ ಕುಲಾಲ್ ಸೇಡಿಯಾಪು, ಪ್ರವೀಣ್ ಸೇಡಿಯಾಪು, ರಫೀಕ್ ಎ. ಕೆ, ತನಿಯಪ್ಪ ಸೇಡಿಯಾಪು, ಹೇಮಂತ್ ಸೇಡಿಯಾಪು, ಸುನಿತ್ ನಾಯಕ್ ಮತ್ತು ರಘು ಸೇಡಿಯಾಪು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here