ಬೆಳ್ಳಾರೆಯಲ್ಲಿ ಮೀಲಾದ್ ಪ್ರಯುಕ್ತ ಮದ್ರಸಾ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆಗೆ ಚಾಲನೆ

0

 

ಹಿದಾಯತುಲ್ ಇಸ್ಲಾಂ ಮದ್ರಸ ಹಾಗೂ ಝಖರಿಯ್ಯಾ ಜುಮಾ ಮಸ್ಜಿದ್ ಬೆಳ್ಳಾರೆ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಮದ್ರಸಾ ವಿದ್ಯಾರ್ಥಿಗಳ ಜಲ್ಸೇ ಮದೀನಾ ಕಲಾ ಸಾಹಿತ್ಯ ಸ್ಪರ್ಧೆ ಕಾರ್ಯಕ್ರಮಕ್ಕೆ ಇಂದು ಬೆಳ್ಳಾರೆ ವಲಿಯುಲ್ಲಾಹಿ (ಖ.ಸಿ) ರವರ ದರ್ಗಾ ಝಿಯಾರತ್ ಮೂಲಕ ಧ್ವಜಾರೋಹಣ ದೊಂದಿಗೆ ಪ್ರಾರಂಭಗೊಂಡಿತು.

ಮದ್ರಸಾ ಮುಖ್ಯೋಪಾಧ್ಯಾಯರಾದ ಬಹು. ಮುಹಮ್ಮದ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಬಹು. ಅಮೀರ್ ಹುದವಿ. ಬಹು. ರಫೀಕ್ ಮುಸ್ಲಿಯಾರ್, ಅದ್ಯಾಪಕರುಗಳಾದ ಬಹು.ಝೈನುದ್ದೀನ್ ಮುಸ್ಲಿಯಾರ್, ಬಹು. ಹಸೈನಾರ್ ಮುಸ್ಲಿಯಾರ್, ಬಹು.ಶಮೀಮ್ ಹುದವಿ ಮುಂತಾದ ವರು ಉಪಸ್ಥಿತರಿದ್ದರು.
ಬಹು .ಸುಲೈಮಾನ್ ಮುಸ್ಲಿಯಾರ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here