ಪುತ್ತೂರು: ಮಾ.5 ರಂದು ನಡೆದ ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಚುನಾವಣೆಯಲ್ಲಿ ಮನೋಹರ್ ಕೆ.ವಿ ಅವರು ಪುನರಾಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಕಕ್ವೆ,ಕಾರ್ಯದರ್ಶಿಯಾಗಿ ಚಿನ್ಮಯ್ ರೈ, ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ವಿಜೇತರಾಗಿದ್ದಾರೆ.
ವಿಜೇತ ಅಭ್ಯರ್ಥಿಗಳು ಮತಗಟ್ಟೆಯಿಂದ ಹೊರ ಬರುತ್ತಿದ್ದಂತೆ ವಕೀಲರು ಮಾಲಾರ್ಪಣೆ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಚಿನ್ಮಯ್ ರೈ ಅವರ ಬಳಗದವರು, ಹಿಂಜಾವೇ ಸಂಘಟಕರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಪಟಾಕಿ ಕಸವನ್ನು ಗುಡಿಸಿ ಸ್ವಚ್ಛಗೊಳಿಸಿದ ವಿಜೇತ ಅಭ್ಯರ್ಥಿಗಳು
ವಕೀಲರ ಸಂಘದ ಚುನಾವಣೆಯಲ್ಲಿ ವಿಜೇತರ ಸ್ನೇಹಿತ ಬಳಗದವರು ಪಟಾಕಿ ಸಿಡಿಸಿ ಹರ್ಷಾಚಣೆ ವ್ಯಕ್ತಪಡಿಸಿದ ಬಳಿಕ ಪಟಾಕಿ ಕಸವನ್ನು ವಿಜೇತ ಅಭ್ಯರ್ಥಿಗಳು ಮತ್ತು ಸ್ನೇಹಿತರು ಗುಡಿಸಿ ಸ್ವಚ್ಛ ಗೊಳಿಸಿದರು.