ಬಿಜೆಪಿ ಯುವ ಮೋರ್ಛಾ ಕಾರ್ಯದರ್ಶಿ ಚಂದ್ರಹಾಸ ಈಶ್ವರಮಂಗಲರಿಗೆ ಕೊಲೆ ಬೆದರಿಕೆ
ಪುತ್ತೂರು: ಶರತ್ ಮಡಿವಾಳನ ಹೆಣ ಹೇಗೆ ಬಿದ್ದಿದೆ, ಅದೇ ರೀತಿ ನಿನ್ನ ಹೆಣ ಬೀಳುತ್ತದೆ ಎಂದು ಬಿಜೆಪಿ ಯುವ ಮೋರ್ಛಾದ ಪುತ್ತೂರು ತಾಲೂಕು ಕಾರ್ಯದರ್ಶಿ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಸದಸ್ಯ ಚಂದ್ರಹಾಸರವರಿಗೆ ಮಾ.೧೨ರಂದು ಅನಾಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆಯ ಕರೆ ಬಂದಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾ.12ರಂದು ಮಧ್ಯಾಹ್ನ ೧.೫೯ರ ಸಮಯದಲ್ಲಿ ನನ್ನ ಮೊಬೈಲ್ಗೆ ೮೦೪೫೧೯೩೦೩೩ ನಂಬರ್ನಿಂದ ಕರೆ ಬಂದಿದ್ದು ಶರತ್ ಮಡಿವಾಳನ ಹೆಣ ಹೇಗೆ ಬಿದ್ದಿದೆ ಅದೇ ರೀತಿ ನಿನ್ನ ಹೆಣವು ನಾಳೆ ಸಂಜೆಯೊಳಗೆ ಬೀಳುತ್ತದೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಾದ ಬಳಿಕ ಮತ್ತೆರಡು ಮೊಬೈಲ್ ನಂಬರ್ಗಳಾದ ೭೩೫೩೫೮೩೨೪೪ ಹಾಗೂ ೯೯೦೧೬೨೨೨೧೫ ರಿಂದಲೂ ಕರೆ ಬಂದಿದ್ದು ಅದೇ ರೀತಿಯಾಗಿ ಜೀವ ಬೆದರಿಕೆ ಹಾಕಿದ್ದಾರೆ. ಕರೆ ಮಾಡಿದವರು ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಮಾತನಾಡುತ್ತಿದ್ದರು ಎಂದು ಚಂದ್ರಹಾಸರವರು ಸಂಪ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.