ನೆಲ್ಯಾಡಿ: ಮಾ.20 ಹಾಗೂ 21ರಂದು ನಡೆಯಲಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆಯಲ್ಲಿರುವ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ 9ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವದ ಗೊನೆ ಮುಹೂರ್ತ ಮಾ.14ರಂದು ನಡೆಯಿತು.
ದೈವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಹೆಬ್ಬಾರ್ರವರ ನೇತೃತ್ವದಲ್ಲಿ ಗೊನೆ ಮುಹೂರ್ತ ನಡೆಯಿತು. ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಲಿಂಗಪ್ಪ ಡಿ ಗೌಡ ದರ್ಖಾಸು, ವೈ.ಮುತ್ತಪ್ಪ ಗೌಡ ಎಣ್ಣೆತ್ತೋಡಿ, ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು, ಬಾಲಕೃಷ್ಣ ರೈ ತೋಟ, ಸತೀಶ್ ರೈ ತೋಟ, ವೈ.ಎಂ.ಸಂತೋಷ್ ಕುಮಾರ್ ಎಣ್ಣೆತ್ತೋಡಿ, ಕಮಲಾಕ್ಷ ಹೊಸಮನೆ, ಧರ್ಣಪ್ಪ ದಾಸಯ್ಯ, ನಾಗೇಶ ಮರಂದೆ, ಅಣ್ಣಿ ಗೌಡ ಮಣ್ಣಮಜಲು, ಎಂ.ಪಿ.ಜತ್ತಪ್ಪ ಗೌಡ, ವೈ ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಜಗದೀಶ್ ಕಡೆಂಬಿಲ, ದಿನೇಶ್ ಗೌಡ ಕೋಲ್ಪೆ, ವೈ.ಕೊರಗಪ್ಪ ಗೌಡ ಎಣ್ಣೆತ್ತೋಡಿ, ತ್ಯಾಂಪಣ್ಣದೇವಾಡಿಗ, ವಿಶ್ವನಾಥ ಪೂಜಾರಿ ಕಲಾಯಿ, ಜನಾರ್ದನ ಗೌಡ ಶಾಂತಿಮಾರು, ಸಾಂತಪ್ಪ ಗೌಡ ಎಣ್ಣೆತ್ತೋಡಿ, ಜಗದೀಶ ರೈ ತೋಟ, ಪದ್ಮನಾಭ ಗೌಡ ಹೊಸಮನೆ, ಶಂಕರ ಗೌಡ ಹೊಸಮನೆ, ಜಯಂತ ಹೊಸಮನೆ, ಜನಾರ್ದನ ಪೂಜಾರಿ ಕಲಾಯಿ, ಸುಂದರ ಗೌಡ ಸುರಕ್ಷಾ ನಿಲಯ, ಪ್ರಭಾನಂದ ಗೌಡ ಹೊಸಮನೆ, ಶೀನಪ್ಪ ಪೂಜಾರಿ ಕಲಾಯಿ, ಆನಂದ ಪೂಜಾರಿ ಅಂಬರ್ಜೆ, ರಾಜಶೇಖರ ಹೊಸಮನೆ, ಮೋನಪ್ಪ ಗೌಡ ಎಣ್ಣೆತ್ತೋಡಿ, ಪ್ರವೀಣ್ ಗಾಣದಕೊಟ್ಟಿಗೆ, ಗೌರೀಶ್ ಹೊಸಮನೆ, ಹೊನ್ನಪ್ಪ ಗೌಡ ಮುಡಿಪಿನಡ್ಕ, ರಮೇಶ ಗೌಡ ಕಾಯರ್ತಡ್ಕ, ಸದಾನಂದ ಗೌಡ ಮಣ್ಣಮಜಲು, ವಿಶ್ವಾಸ್ ಕಾಯರ್ತಡ್ಕ, ದಿನೇಶ್ ಬಂಗೇರ ಕಲಾಯಿ, ಶ್ರೀಧರ ಪೂಜಾರಿ ಪಾಂಡಿಬೆಟ್ಟು, ಜಗದೀಶ ಕಾಯರ್ತಡ್ಕ, ನೋಣಯ್ಯ ಗೌಡ ಡೆಬ್ಬೇಲಿ, ರತ್ನಾಕರ ಕಾಯರ್ತಡ್ಕ, ಸಂತೋಷ್ ಪೂಜಾರಿ ಕಲಾಯಿ, ಪ್ರಖ್ಯಾತ ರೈ ತೋಟ, ಗಣೇಶ ಪೂಜಾರಿ ಪಾಂಡಿಬೆಟ್ಟು, ಬಾಬು ಗೌಡ ಮುಡಿಪಿನಡ್ಕ, ಜನಾರ್ದನ ಗೌಡ ಸಂಕೇಶ, ಹರೀಶ ಗೌಡ ಮಣ್ಣಮಜಲು, ಕಿರಣ್ ಹೊಸಮನೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.