ಆರ್ಯಾಪು ಒಕ್ಕಲಿಗ ಗೌಡ ಗ್ರಾಮ ಸಮಿತಿ ರಚನೆ

0

  • ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷರಾಗಿ ದಾಮೋದರ್ ಗೌಡ, ಕಾರ್ಯದರ್ಶಿ ಜಗದೀಶ್ ಗೌಡ

 

ಪುತ್ತೂರು: ಪುತ್ತೂರು ತಾಲೂಕು ಆರ್ಯಾಪು ಒಕ್ಕಲಿಗ ಗೌಡ ಗ್ರಾಮ ಸಮಿತಿ ರಚನೆಯನ್ನು ಇತ್ತೀಚೆಗೆ ಸಮಿತಿ ಗೌರವ ಸಲಹೆಗಾರ ಯಮುನ ಬಾಬು ಗೌಡ ಗೆಣಸಿನಕುಮೇರು ಅವರ ಮನೆಯಲ್ಲಿ ಮಾಡಲಾಯಿತು. ಗ್ರಾಮ ಸಮಿತಿ ಅಧ್ಯಕ್ಷರಾಗಿ ದಾಮೋದರ್ ಗೌಡ ಗೆಣಸಿಕುಮೇರು, ಉಪಾಧ್ಯಕ್ಷರಾಗಿ ಕೃಷ್ಣಪ್ರಸಾದ್ ಬೇಜಾರು ಮತ್ತು  ಕಾರ್ಯದರ್ಶಿಯಾಗಿ ಜಗದೀಶ್ ಗೌಡ ಮೇಗಿನಪಂಜ ಅವರನ್ನು ಆಯ್ಕೆ ಮಾಡಲಾಗಿದೆ.

 

ಮಾತೃ ಸಂಘ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಡುಬೈಲು ಸುಂದರ ಗೌಡ ಅವರ ಉಪಸ್ಥಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಖಜಾಂಚಿಯಾಗಿ ಸತೀಶ್ ಗೌಡ ಅಗರ್ತಬೈಲು ನೀರುಕುಕ್ಕು, ಗೌರವ ಅಧ್ಯಕ್ಷರಾಗಿ ಉಮೇಶ್ ಗೌಡ ಪಿಲಿಗುಂಡ ಅವರು ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಊರ ಗೌಡರಾಗಿ ಕಿಶೋರ್ ಗೌಡ ಮರೀಕೆ ಅವರನ್ನು ಘೋಷಣೆ ಮಾಡಲಾಯಿತು. ಉಳಿದಂತೆ ಸುಮಾರು ಸುಮಾರು 19ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಸಭೆಯಲ್ಲಿ ಮುಂದಿನ ಕಾರ್ಯಚಟುವಟಿಕೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಖಜಾಂಚಿ ಲಿಂಗಪ್ಪ ಗೌಡ ತೆಂಕಿಲ, ವಲಯ ಉಸ್ತುವಾರಿ ಆನಂದ ಗೌಡ ಮೂವಪ್ಪು, ಉಮೇಶ್ ಪಿಲಿಗುಂಡ, ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಉಪಸ್ಥಿತರಿದ್ದರು. ಚೆನ್ನಪ್ಪ ಗೌಡ ಗೆಣಸಿಕುಮೇರು ಕಾರ್ಯಕ್ರಮ ನಿರ್ವಹಿಸಿದರು. ರವಿ ಗೌಡ ಗೆಣಸಿಕುಮೇರು ಸಹಕರಿಸಿದರು.

 

LEAVE A REPLY

Please enter your comment!
Please enter your name here