ಪಾಂಗಳಾಯಿ ಮುಂಡ್ಯತ್ತಾಯ ದೈವಸ್ಥಾನದ ಆಡಳಿತ ಮಂಡಳಿಗೆ ಆಯ್ಕೆ

0

  • ಅಧ್ಯಕ್ಷರಾಗಿ ತಾರಾನಾಥ ರೈ, ಕಾರ್ಯದರ್ಶಿಯಾಗಿ ಪುರುಷೋತ್ತಮ 

ಪುತ್ತೂರು: ಪರ್ಲಡ್ಕ ಪಾಂಗಳಾಯಿ ಶ್ರೀ ಮುಂಡ್ಯತ್ತಾಯ ದೈವಸ್ಥಾನದ ಆಡಳಿತ ಮಂಡಳಿಯ ಮಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ತಾರಾನಾಥ ರೈ ಬಾಲ್ಯೊಟ್ಟುಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ  ಪಾಂಗಾಳಾಯಿಯವರು ಆಯ್ಕೆಯಾಗಿದ್ದಾರೆ.

 

ದೈವಸ್ಥಾನದ ಅರಸು ಮುಂಡ್ಯತ್ತಾಯ ಸಭಾಂಗಣದಲ್ಲಿ ಮಾ.6ರಂದು ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಉಮಾಶಂಕರ್  ಪಾಂಗಳಾಯಿ, ಜತೆ ಕಾರ್ಯದರ್ಶಿಯಾಗಿ ಶಿವಕುಮಾರ್ ಕಲ್ಲಿಮಾರ್ ಹಾಗೂ ಖಜಾಂಚಿಯಾಗಿ ಸರೋಜಿನಿ ಅಭಿಕಾರ್‌ರವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ರಾಜ್‌ಗೋಪಾಲ ಶಗ್ರಿತ್ತಾಯ, ವಿನಯ ಭಂಡಾರಿ, ಸಂಪತ್ ಕುಮಾರ್, ಸಂತೋಷ್ ಬೋನಂತಾಯ, ಸುರೇಶ್ ಪಾಂಗಳಾಯಿ, ಸೂರಪ್ಪ ಗೌಡ, ಗೋಪಾಲಕೃಷ್ಣ ನಾಯ್ಕ ಕಲ್ಲಿಮಾರ್, ವೀಕ್ಷಿತ್ ಕಲ್ಲಿಮಾರ್, ಪ್ರದೀಪ್ ಆಚಾರ್ಯ ಪಾಂಗಳಾಯಿ, ಪ್ರಶಾಂತ್ ಪಾಂಗಳಾಯಿ, ಚಂದ್ರಾವತಿ, ಗಂಗಾಧರ , ಜಯಶಂಕರ ರೈ, ಪ್ರೇಮ ಶಿವಪ್ಪ ಗೌಡ, ಲಕ್ಷ್ಮೀ ಮರೀಲ್ ಹಾಗೂ ವೆಂಕಟ್ರಮಣ ಇಂದಾಜೆಯವರನ್ನು ಆಯ್ಕೆ ನಡೆಸಲಾಯಿತು.

LEAVE A REPLY

Please enter your comment!
Please enter your name here