ಕಡಬ: ಮೀನಾಡಿ ಬಳಿ ಕಾರು-ಬೈಕ್ ನಡುವೆ ಅಪಘಾತ: ಬೈಕ್ ಸವಾರರಿಗೆ ಗಾಯ: ಇತ್ತಂಡಗಳ ನಡುವೆ ವಾಗ್ವಾದ

0

ಕಡಬ: ಸುಬ್ರಹ್ಮಣ್ಯ-ಧರ್ಮಸ್ಥಳ ಹೆದ್ದಾರಿಯ ಮರ್ದಾಳ ಸಮೀಪದ ಮೀನಾಡಿಯಲ್ಲಿ ಬೈಕ್ ಹಾಗೂ ಕಾರುಗಳೆರಡು ಅಪಘಾತಕ್ಕೀಡಾದ ಘಟನೆ ಇಂದು ಮಧ್ಯಾಹ್ನ ನಡೆದಿರುವುದಾಗಿ ವರದಿಯಾಗಿದೆ.

ಇಚಿಲಂಪಾಡಿ ಕಡೆಯಿಂದ ಬೈಕ್ ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಕೇಪು ದೇವಸ್ಥಾನದ ಸಮೀಪ ಢಿಕ್ಕಿ ಸಂಭವಿಸಿದೆ. ಅಪಘಾತಕ್ಕೀಡಾಗಿ ಬಿದ್ದ ಕಾರಿಗೆ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಇನ್ನೊಂದು ಕಾರು ಢಿಕ್ಕಿಯಾಗಿದೆ.ಘಟನೆಯಲ್ಲಿ ಬೈಕ್ ಸವಾರರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.

 

ಬೈಕ್ ಸವಾರರು ಮೈಸೂರು ಮೂಲದವರು ಎನ್ನಲಾಗಿದ್ದು ಢಿಕ್ಕಿ ಹೊಡೆದ ಕಾರು ನಂಜನಗೂಡು ಮೂಲದ್ದು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೊಂದು ಕಾರು ನೆಲ್ಯಾಡಿ ವ್ಯಾಪ್ತಿಯದ್ದು ಎನ್ನಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಇತ್ತಂಡಗಳ ನಡುವೆ ವಾಗ್ವಾದ ನಡೆಯುತ್ತಿದ್ದು ಪೊಲೀಸರ ಬರುವಿಕೆಗಾಗಿ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here